ಸುದ್ದಿ ಬಿಡುಗಡೆ ಪತ್ರಿಕಾ ಸರ್ಕ್ಯೂಲೇಶನ್ ವಿಭಾಗದ ರವೀಂದ್ರ ಕಬಕ ನಿಧನ

0


ಪುತ್ತೂರು: ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಸರಣಾ ವಿಭಾಗದ ಮುಖ್ಯಸ್ಥರಾಗಿದ್ದ ರವೀಂದ್ರ ಕಬಕ ಮೇ 10 ರಂದು ನಿಧನರಾದರು.


ಪ್ರಗತಿಪರ‌ ಕೃಷಿಕರಾಗಿರುವ ಕಬಕ ಗ್ರಾಮದ ಪೋಳ್ಯ ನಿವಾಸಿ ರವೀಂದ್ರ ಕಬಕ ಅವರು ಅಲ್ಪಕಾಲದ ಅಸೌಖ್ಯದಿಂದ ಕೆಲವು ದಿನಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲೇ ಆರೈಕೆ ಪಡೆಯುತ್ತಿದ್ದರು. ಮೇ10 ರಂದು ಬೆಳಿಗ್ಗೆ ಅವರು ನಿಧನರಾದರು. ರವೀಂದ್ರ ಅವರು ಕಬಕ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷರಾಗಿದ್ದರು. ಕಬಕದಲ್ಲಿ ಬೇಕರಿ ಅಂಗಡಿಯನ್ನು ಹೊಂದಿದ್ದರು.ಮೃತರು ತಾಯಿ, ಪತ್ನಿ, ಇಬ್ಬರು ಪುತ್ರರನ್ನು ಹಾಗು ಸಹೋದರ, ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here