ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ವತಿಯಿಂದ ಬಹುಮುಖ ಪ್ರತಿಭೆ ಶಾನ್ಯ ಮಂಗಳೂರುರವರಿಗೆ ಸನ್ಮಾನ

0

ಪುತ್ತೂರು: ರಕ್ತಸಂಜೀವಿ ಬ್ಲಡ್ ಗ್ರೂಪ್ ಪುತ್ತೂರು ಇದರ ವತಿಯಿಂದ ಬಹುಮುಖ ಪ್ರತಿಭೆ ಮಂಗಳೂರಿನ ಶಾನ್ಯ ಅವರಿಗೆ ಅವರ ಮನೆಯಲ್ಲಿ ಮೇ 19 ರಂದು ಸನ್ಮಾನ ಮಾಡಲಾಯಿತು.

ಮುಖ್ಯ ಅತಿಥಿಗಳಾಗಿ ಗಾಯಕಿ ಸುಮಿತ್ರಾ ಬಾಯಂಬಾಡಿ ಪುತ್ತೂರು, ಪ್ರತಿಭೆಯ ತಂದೆ ತಾಯಿ ಬಾಲಕೃಷ್ಣ – ದೀಪ ದಂಪತಿ ಹಾಗೂ ಪ್ರತಿಭೆಯ ಅಜ್ಜಿ ಕುಸುಮ ಉಪಸ್ಥತರಿದ್ದರು. ಸಿಟಿಗುಡ್ಡೆ ಶ್ರೀ ಕೃಷ್ಣ ಯುವಕ ಮಂಡಲದ ಅಧ್ಯಕ್ಷ ಹಾಗೂ ಸ್ನೇಹ ಸಿಲ್ಕ್ ಅಂಡ್ ರೆಡಿಮೇಡ್ ಬೊಳುವಾರು ಪುತ್ತೂರು ಇದರ ಉದ್ಯೋಗಿ ಬಿ.‌ರಾಜೀವ ಗೌಡ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮದ ರೂವಾರಿ ನವೀನ್ ಪುತ್ತೂರು ಅತಿಥಿಗಳಿಗೆ ಹೂ ನೀಡಿ ಅಭಿನಂದಿಸಿದರು. ಚಿತ್ರನಟ ಕಲಾವಿದ ಕಷ್ಣಪ್ಪ ಶಿವನಗರ ನಿರೂಪಿಸಿದರು.

LEAVE A REPLY

Please enter your comment!
Please enter your name here