ಯಂಗ್ ಬ್ರಿಗೇಡ್ ವತಿಯಿಂದ ಶಾಸಕರಿಗೆ ಸನ್ಮಾನ

0

ಪುತ್ತೂರು: ಯಂಗ್ ಬ್ರಿಗೇಡ್ ಸೇವಾದಳದ ವತಿಯಿಂದ ಪುತ್ತೂರು ನೂತನ ಶಾಸಕರಾಗಿ ಚುನಾಯಿತರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿರವರಿಗೆ ಮತ್ತು ಈ ಚುನಾವಣೆಯಲ್ಲಿ ಗೆಲುವಿಗಾಗಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹಗಲು ರಾತ್ರಿ ಎನ್ನದೆ ಶಕ್ತಿ ಮೀರಿ ದುಡಿದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈರವರಿಗೆ ಹಾಗೂ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ ಕೆ.ಬಿ ರವರಿಗೆ ಯಂಗ್ ಬ್ರಿಗೇಡ್ ಸೇವಾದಳದ ವತಿಯಿಂದ ಪುತ್ತೂರು ಪುರಭವನದಲ್ಲಿ ಸನ್ಮಾನಿಸಲಾಯಿತು.

ದ.ಕ ಜಿಲ್ಲಾ ಯಂಗ್ ಬ್ರಿಗೇಡ್ ಸೇವಾದಳದ ಅಧ್ಯಕ್ಷ ರಂಜಿತ್ ಬಂಗೇರ, ಪುತ್ತೂರು ಯಂಗ್ ಬ್ರಗೇಡ್ ಸೇವಾದಳದ ಅಧ್ಯಕ್ಷ ಆಶಿಕ್ ಸಂಪ್ಯ, ನಗರಸಭಾ ಸದಸ್ಯ ಮಹಮ್ಮದ್ ರಿಯಾರ ಸಹಿತ ಎಲ್ಲಾ ಯಂಗ್ ಬ್ರಿಗೇಡ್ ಸೇವಾದಳದ ಪದಾಧಿಕಾರಿಗಳು, ಸದಸ್ಯರುಗಳು ಹಾಗೂ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here