ಪಾಣಾಜೆ; ವಿಶ್ವ ತಂಬಾಕು ವಿರೋಧಿ ದಿನಾಚರಣೆ

0

ನಿಡ್ಪಳ್ಳಿ; ಅಖಿಲ ಕರ್ನಾಟಕ ಜನಜಾಗೃತಿ  ವೇದಿಕೆಯ ಮಾರ್ಗದರ್ಶನದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯ ಅಂಗವಾಗಿ  ಮಾಹಿತಿ ಕಾರ್ಯಕ್ರಮ ಪಾಣಾಜೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸಭಾ ಭವನದಲ್ಲಿ ಜೂ.6 ರಂದು ನಡೆಯಿತು.     

ಜನಜಾಗೃತಿ ವೇದಿಕೆಯ ಬೆಟ್ಟಂಪಾಡಿ ವಲಯದ ಮಾಜಿ ಅಧ್ಯಕ್ಷ ಸದಾಶಿವ  ರೈ ಸೂರಂಬೈಲು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ  ತಾಲೂಕು ಕೃಷಿ ಮೆಲ್ವೀಚಾರಕ ಉಮೇಶ್ ಮಾತನಾಡಿ ತಂಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದರು.

ಬೆಟ್ಟಂಪಾಡಿ  ಜನಜಾಗೃತಿ ವೇದಿಕೆಯ ವಲಯಾಧ್ಯಕ್ಷ ರವಿ ಕಟೀಲ್ತಡ್ಕ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ  ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಭಟ್,  ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಬೆಟ್ಟಂಪಾಡಿ ವಲಯಾಧ್ಯಕ್ಷ   ಬಾಲಕೃಷ್ಣ ಗೌಡ, ಪಾಣಾಜೆ ಎ  ಒಕ್ಕೂಟದ ಅಧ್ಯಕ್ಷೆ  ಕಮಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.

 ಒಕ್ಕೂಟದ ಪದಾಧಿಕಾರಿಗಳು,ದಾಖಲಾತಿ  ಸಮಿತಿ ಸದಸ್ಯರು, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು. ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಚಂದ್ರಶೇಖರ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು. ಪಾಣಾಜೆ ಎ ಒಕ್ಕೂಟದ ಸೇವಾ ಪ್ರತಿನಿಧಿ  ಮಮತ ಸ್ವಾಗತಿಸಿದರು.ಒಕ್ಕೂಟದ ಜತೆ ಕಾರ್ಯದರ್ಶಿ ಪ್ರಮೀಳಾ ವಂದಿಸಿದರು.

LEAVE A REPLY

Please enter your comment!
Please enter your name here