![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ನೆಲ್ಯಾಡಿ: ಜೂ. 11 ರಂದು ಜರುಗಿದ ಜೇಸಿ ಮಧ್ಯಂತರ ಸಮಾವೇಶದಲ್ಲಿ ಕೊಕ್ಕಡ ಜೇಸಿಐ ಅಧ್ಯಕ್ಷ ಜಿತೇಶ್ ಎಲ್ ಪಿರೇರಾ ಅವರಿಗೆ ಸಿ. ಪ್ರಾಂತ್ಯದ ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೋಡು ಮಾರ್ಗ ನೇತ್ರಾವತಿ ಜೇಸಿಯ ಆತಿಥ್ಯದಲ್ಲಿ ಬೆಂಜನಪದವು ಎಂಬಲ್ಲಿ ಸಮಾವೇಶ ಜರುಗಿತು.
ಘಟಕದಲ್ಲಿ ಐವತ್ತು ಸದಸ್ಯರ ಸೇರ್ಪಡೆ, ವಲಯಾಡಳಿತ ಮಂಡಳಿ ಸಭೆಯ ಆಯೋಜನೆ, ಹಲವಾರು ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ತರಬೇತಿ, ಸಾಧಕರಿಗೆ ಸನ್ಮಾನ, ಬಡ ಮಕ್ಕಳಿಗೆ ಆರ್ಥಿಕ ನೆರವು, ಜೇಸಿ ಫೌಂಡೇಶನಿಗೆ ಹೆಚ್. ಜಿ. ಎಫ್, ಜೆ. ಎಫ್. ಎಂ. ಕೊಡುಗೆ, ನಿರಂತರ ಘಟಕಾಧ್ಯಕ್ಷರ ವಾರ್ತಾ ಪತ್ರ ಪ್ರಕಟಣೆ, ವಲಯದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
![](https://puttur.suddinews.com/wp-content/uploads/2023/06/9f601036-e342-4c06-9015-276d34d82b8a.jpg)
2023 ನೇ ಸಾಲಿನಲ್ಲಿ ನಡೆಸಿದ ಉತ್ತಮ ಕಾರ್ಯಕ್ರಮಗಳು ಗುರುತಿಸಿ ಸಿ. ಪ್ರಾಂತ್ಯದ ಔಟ್ ಸ್ಟ್ಯಾಂಡಿಂಗ್ ಪ್ರೆಸಿಡೆಂಟ್ ವಿನ್ನರ್, ಡೈಮಂಡ್ ಲೋಮ್, ವಿದ್ಯಾನಿಧಿ ಪುರಸ್ಕಾರ, ಟಾಪ್ 20 ಇನ್ ಟ್ರೈನಿಂಗ್ ಏರಿಯಾ, ಪ್ರೋಗ್ರಾಮ್ ಏರಿಯಾ ಎವಾರ್ಡುಗಳನ್ನು ವಲಯಾಡಳಿತ ಸಮಿತಿ ಸಮಕ್ಷಮದಲ್ಲಿ
ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ ಅವರು ವಿತರಿಸಿದರು.
![](https://puttur.suddinews.com/wp-content/uploads/2023/06/eb7cd010-158e-4557-8678-6ab56299e724.jpg)
![](https://puttur.suddinews.com/wp-content/uploads/2023/06/6ccebbb6-19a3-4138-9024-a112d3ec8837.jpg)