ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕರುಣಾಕರ ಪೂಜಾರಿ ಪಟ್ಟೆಯವರಿಗೆ ಶ್ರದ್ಧಾಂಜಲಿ

0

ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸಂಘದ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಕರುಣಾಕರ ಪೂಜಾರಿ ಪಟ್ಟೆಯವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ‍್ಯಕ್ರಮ ಮೇ.30ರ ಸಂಘದ ಮಾಸಿಕ ಸಭೆಯಲ್ಲಿ ಜರಗಿತು.


ಉತ್ತಮ ಸೇವೆಗಣೇಶ್ ನಿಡ್ವಣ್ಣಾಯ
ಸಂಘದ ಅಧ್ಯಕ್ಷ ಗಣೇಶ್ ನಿಡ್ವಣ್ಣಾಯರವರು ಮಾತನಾಡಿ ಕರುಣಾಕರ ಪೂಜಾರಿರವರು ಸಂಘದ ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ಉತ್ತಮ ಸೇವೆಯನ್ನು ನೀಡಿದ್ದಾರೆ. ಅವರ ಅಗಲುವಿಕೆ ತುಂಬಾ ನೋವು ತಂದಿದೆ ಎಂದರು.

ಸ್ನೇಹಜೀವಿ- ಉದಯ ರೈ
ಸಂಘದ ನಿರ್ದೇಶಕ ಉದಯ ರೈ ಮಾದೋಡಿಯವರು ಮಾತನಾಡಿ ಕರುಣಾಕರ ಪೂಜಾರಿ ಸ್ನೇಹಜೀವಿಯಾಗಿದ್ದು, ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ನಮ್ಮ ಸಂಘದ ಉಪಾಧ್ಯಕ್ಷರಾಗಿ, ನಿರ್ದೆಶಕರಾಗಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ.

ಅಚ್ಚುಮೆಚ್ಚಿನ ವ್ಯಕ್ತಿ- ಮಹಾಬಲ ಶೆಟ್ಟಿ
ಇನ್ನೂರ್ವ ನಿರ್ದೇಶಕ ಮಹಾಬಲ ಶೆಟ್ಟಿ ಕೊಮ್ಮಂಡರವರು ಮಾತನಾಡಿ ಕರುಣಾಕರ ಪೂಜಾರಿರವರು ಸಮಾಜಮುಖಿ ಕಾರ‍್ಯದ ಮೂಲಕ ಎಲ್ಲರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದಾರೆ ಎಂದರು.

ಉತ್ತಮ ಕೆಲಸವನ್ನು ಮಾಡಿದ್ದಾರೆ- ಚಂದ್ರಶೇಖರ್
ಸಂಘದ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿರವರು ಮಾತನಾಡಿ ಸಂಘದಲ್ಲಿ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಕರುಣಾಕರ ಪೂಜಾರಿಯವರು ಸೇವೆಗೈದು ಸಹಕಾರ ತತ್ವದ ಆಡಿಯಲ್ಲಿ ಉತ್ತಮ ಕೆಲಸವನ್ನು ಮಾಡಿದ್ದಾರೆ ಎಂದು ಶ್ರದ್ಧಾಂಜಲಿ ಸಲ್ಲಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ,ನಿರ್ದೇಶಕರುಗಳಾದ ಸೋಮನಾಥ ಕನ್ಯಾಮಂಗಲ, ತಿಮ್ಮಪ್ಪ ಗೌಡ ಮುಂಡಾಲ, ತನಿಯಪ್ಪ ನಾಯ್ಕ ಕಾರ್ಲಾಡಿ, ಚೇತನ್ ಕುಮಾರ್ ಕೋಡಿಬೈಲು, ಪ್ರಕಾಶ್ ರೈ ಸಾರಕರೆ, ನಿರ್ಮಲ ಕೇಶವ ಗೌಡ ಅಮೈ, ವೇದಾವತಿ ಕೆಡೆಂಜಿರವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here