ಒಡಿಯೂರು ಶ್ರೀ ಜನ್ಮದಿನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಮುಂಬೈನ ಉದ್ಯಮಿ  ಸದಾಶಿವ ಶೆಟ್ಟಿ ಕೂಳೂರು ಕನ್ಯಾನ –   ಅಧ್ಯಕ್ಷರಾಗಿ ಬರೋಡಾದ  ಉದ್ಯಮಿ  ಶಶಿಧರ ಬಿ.ಶೆಟ್ಟಿ 

0

ವಿಟ್ಲ: ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಆಗಸ್ಟ್ 8ರಂದು ನಡೆಯಲಿರುವ ಒಡಿಯೂರು  ಶ್ರೀಗಳ ಜನ್ಮದಿನೋತ್ಸವ-ಗ್ರಾಮೋತ್ಸವ 2023ರ ಸಮಿತಿ ರಚನೆಯು ಶ್ರೀ ಗುರುದೇವಾನಂದ ಸ್ವಾಮೀಜಿರವರ ಮಾರ್ಗದರ್ಶಣದಲ್ಲಿ ಸಾಧ್ವಿ ಶ್ರೀ ಮಾತಾನಂದಮಯೀರವರ ಉಪಸ್ಥಿತಿಯಲ್ಲಿ ಸಂಸ್ಥಾನದ ಸಭಾ ಭವನದಲ್ಲಿ ನಡೆಯಿತು.

ಗೌರವ ಮಾರ್ಗದರ್ಶಕರಾಗಿ ಶ್ರೀ ಸಂಸ್ಥಾನದ ಯೋಗಿನಿ ಸಾಧ್ವಿ ಶ್ರೀ ಮಾತಾನಂದಮಯೀ,  ಗೌರವಾಧ್ಯಕ್ಷರಾಗಿ ಮುಂಬೈನ ಉದ್ಯಮಿ  ಸದಾಶಿವ ಶೆಟ್ಟಿ ಕೂಳೂರು ಕನ್ಯಾನ, ಅಧ್ಯಕ್ಷರಾಗಿ ಬರೋಡಾದ ಖ್ಯಾತ ಉದ್ಯಮಿ  ಶಶಿಧರ ಬಿ.ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಕೆ. ಪದ್ಮನಾಭ ಕೊಟ್ಟಾರಿ  ಲೋಕನಾಥ ಜಿ. ಶೆಟ್ಟಿ ತಾಳಿಪ್ಪಾಡಿಗುತ್ತುರವರನ್ನು ಆಯ್ಕೆ ಮಾಡಲಾಯಿತು‌. ಉಳಿದಂತೆ  ಶ್ರೀ ಸಂಸ್ಥಾನದ ಸಹಸಂಸ್ಥೆಗಳ ಮುಖ್ಯಸ್ಥರನ್ನೊಳಗೊಂಡ ಜನ್ಮದಿನೋತ್ಸವ ಸಮಿತಿಯನ್ನು ರಚಿಸಲಾಯಿತು.

LEAVE A REPLY

Please enter your comment!
Please enter your name here