ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಪುಣಚ ವಲಯ ಸಮಿತಿ ಮಹಾಸಭೆ-ನೂತನ ಸಮಿತಿ ರಚನೆ

0

ಪುಣಚ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿಯ ಪುಣಚ ವಲಯ ಸಮಿತಿ ಮಹಾಸಭೆಯು ಜೂ.14 ರಂದು ಪುಣಚ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಪುಣಚ ವಲಯ ಸಮಿತಿ ಅಧ್ಯಕ್ಷೆ ಶ್ರೀಮತಿ ನಳಿನಿ ಸುವರ್ಣ ದಲ್ಕಜೆಗುತ್ತು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಭೆಯಲ್ಲಿ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಜಯಂತ್ ಉರ್ಲಾಂಡಿ, ಪುತ್ತೂರು ಕ್ಷೇತ್ರ ಸಮಿತಿಯ ಅಧ್ಯಕ್ಷ ಜಯರಾಮ ಬಿ. ಸಂದರ್ಭೋಚಿತವಾಗಿ ಮಾತನಾಡಿದರು. ಕೃಷ್ಣಪ್ಪ ಗೌಡ ಗುರ್ಮೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಅರುಣ ಅಗ್ರಾಳ ವರದಿ ವಾಚಿಸಿದರು. ಶ್ರೀಮತಿ ಉದಯ ಪ್ರಾರ್ಥನೆ ಗೈದರು. ಶ್ರೀಮತಿ ಅರುಣ ಅಗ್ರಾಳ ಕಾರ್ಯಕ್ರಮ ನಿರೂಪಿಸಿ, ಶ್ರೀಮತಿ ಬೇಬಿ ಸ್ವಾಗತಿಸಿ, ಮನೋಹರ್ ನಾಯಕ್ ಧನ್ಯವಾದ ಸಮರ್ಪಿಸಿದರು.

ನೂತನ ಸಮಿತಿ ರಚನೆ:
ಈ ಸಂದರ್ಭದಲ್ಲಿ ನೂತನ ಸಮಿತಿ ರಚಿಸಲಾಯಿತು. ಅಧ್ಯಕ್ಷರಾಗಿ ನಿರ್ಮಲ ಪಿಲಿಂಜ, ಉಪಾಧ್ಯಕ್ಷರಾಗಿ ಆತಿಕಾ ಬುಳೇರಿಕಟ್ಟೆ, ಕಾರ್ಯದರ್ಶಿ ಉದಯ ಮಾಯಿಲಮೂಲೆ, ಜೊತೆ ಕಾರ್ಯದರ್ಶಿ ರೇಷ್ಮಾ ಬುಳೇರಿಕಟ್ಟೆ, ಕೋಶಾಧಿಕಾರಿಯಾಗಿ ಕೌಸರ್ ಮಣಿಲ ರವರನ್ನು ಆಯ್ಕೆಮಾಡಲಾಯಿತು.

LEAVE A REPLY

Please enter your comment!
Please enter your name here