





ಪುತ್ತೂರು:ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಪುತ್ತೂರು ತಾಲೂಕು ಮಟ್ಟದ ಜ್ಞಾನರಥ/ ಜ್ಞಾನಪಥ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧಾರಿತ ವಿವಿಧ ಸ್ಪರ್ಧೆಗಳು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.11ರಂದು ನಡೆಯಿತು.


ಪ್ರಾಥಮಿಕ ವಿಭಾಗದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅದ್ವಿತ್ ರಾವ್ (ಶ್ರೀ ರಮೇಶ್ ರಾವ್ ಹಾಗೂ ಶ್ರೀಮತಿ ಶಿಲ್ಪಾ ರಾವ್) ಭಾಷಣದಲ್ಲಿ ದ್ವಿತೀಯ ಹಾಗೂ ಪೌಢ ಶಾಲಾ ವಿಭಾಗದಲ್ಲಿ ನಿಲಿಷ್ಕ. ಕೆ ( ಶ್ರೀ ದಿನೇಶ್ ನಾಯ್ಕ ಕೆ ಜಿ ಹಾಗೂ ಶ್ರೀಮತಿ ಸ್ಮಿತಾ ಶ್ರೀ ಬಿ) ಚಿತ್ರಕಲೆಯಲ್ಲಿ ಪಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.















