ಬಜತ್ತೂರು: ಶೌರ್ಯವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ಶ್ರಮದಾನ

0

ನೆಲ್ಯಾಡಿ: ಉಪ್ಪಿನಂಗಡಿ ವಲಯದ ಶೌರ್ಯವಿಪತ್ತು ನಿರ್ವಹಣಾ ಘಟಕ ಸದಸ್ಯರಿಂದ ಬಜತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಒಳಚರಂಡಿ ದುರಸ್ತಿ ಮತ್ತು ಸ್ವಚ್ಛತೆ ಕೆಲಸವನ್ನು ಶ್ರಮಾದಾನದ ಮೂಲಕ ಮಾಡಲಾಯಿತು.


ಮಳೆಗಾಲದಲ್ಲಿ ನೀರು ನಿಂತು ಓಡಾಡಲು ತೀರ ಕಷ್ಟಕರವಾಗಿರುವುದನ್ನು ಮನಗಂಡು ಉಪ್ಪಿನಂಗಡಿ ಬಜತ್ತೂರು ವಿಪತ್ತು ನಿರ್ವಹಣಾ ಘಟಕದ ಸದಸ್ಯರಿಂದ ವಳಾಲಿನಲ್ಲಿ ಒಳಚರಂಡಿ ದುರಸ್ತಿ ಮತ್ತು ಸ್ವಚ್ಛತೆ ಶ್ರಮದಾನ ಮಾಡಲಾಯಿತು. ವಲಯದ ಮೇಲ್ವಿಚಾರಕರಾದ ಶಿವಪ್ಪ ಅವರು ಮಾಹಿತಿ ಮಾರ್ಗದರ್ಶನ ನೀಡಿದರು. ಘಟಕದ ಪ್ರತಿನಿಧಿ ಸದಾನಂದ ಶಿಬಾರ್ಲ, ಘಟಕದ ಸಂಯೋಜಕಿ ಮಮತ, ಸದಸ್ಯರಾದ ಮನೋಜ್ ನೀರಕಟ್ಟೆ, ವಾಸುದೇವ ರೆಂಜಾಳ, ಸಾವಿತ್ರಿ ಶಿಬಾರ್ಲ, ಅನಿತಾ ಪಿಜಕ್ಕಳ, ಸುಜಾತ ರೆಂಜಾಳ, ರವೀಂದ್ರ ಒರುಂಬೋಡಿ, ದಯಾನಂದ ಆರಾಲು ತೋಟ, ಸುರೇಶ ಶಿಬಾರ್ಲ, ಬೇಬಿ ಬಾರಿಕೆ, ಗೋಪಾಲ ಬಾರಿಕೆ, ವಾಸಪ್ಪ ಬಂಡಾಡಿ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು. ಗ್ರಾಮ ಪಂಚಾಯತ್ ವತಿಯಿಂದ ಉಪಾಹಾರದ ವ್ಯವಸ್ಥೆ ಮಾಡಲಾಯಿತು. ರೆಹಮಾನ್ ವಳಾಲುರವರು ತಂಪು ಪಾನೀಯ ನೀಡಿ ಸಹಕರಿಸಿದರು.

LEAVE A REPLY

Please enter your comment!
Please enter your name here