ಒಡಿಯೂರು ಶ್ರೀ ಬಳಗದಿಂದ ರಕ್ತದಾನ ಶಿಬಿರ – ಪೂರ್ವಭಾವಿ ಸಭೆ, ವಿದ್ಯಾರ್ಥಿನಿಗೆ ಧನ ಸಹಾಯ

0

ಪುತ್ತೂರು: ಒಡಿಯೂರು ಶ್ರೀ ಗುರುದೇವಾ ಬಳಗ , ಒಡಿಯೂರು ಶ್ರೀ ವಿವಿಧೋದ್ದೇಶ ಸಹಕಾರಿ ಹಾಗೂ ಗ್ರಾಮ ವಿಕಾಸ ಯೋಜನೆ ಇವುಗಳ ಆಶ್ರಯದಲ್ಲಿ ರೋಟರಿ ಕ್ಲಬ್ ಪುತ್ತೂರು ಸಿಟಿ ,ಲಯನ್ಸ್ ಕ್ಲಬ್ ಪುತ್ತೂರು ಮತ್ತು ರೆಡ್ ಕ್ರಾಸ್ ಸೊಸೈಟಿ ಪುತ್ತೂರು ಇವುಗಳ ಸಹಯೋಗದೊಂದಿಗೆ , ಲಯನ್ಸ್ ಕ್ಲಬ್ ಪುತ್ತೂರು ಇಲ್ಲಿ ಜೂ.25 ರಂದು ಬೃಹತ್ ರಕ್ತದಾನ ಶಿಬಿರವೂ ನಡೆಯಲಿದ್ದು, ಕಾರ್ಯಕ್ರಮ ರೂಪು ರೇಷೆ ಬಗ್ಗೆ ಪೂರ್ವಭಾವಿ ಸಭೆಯೂ ಜೂ.19ರಂದು ಹೊಟೇಲ್ ಲಕ್ಷ್ಮೀ ಇದರ ಸಭಾಂಗಣದಲ್ಲಿ ನಡೆಯಿತು. ಗುರುದೇವಾ ಸೇವಾ ಬಳಗದ ಅಧ್ಯಕ್ಷ ಸುಧೀರ್ ನೋಂಡಾ ರಕ್ತದಾನ ಶಿಬಿರ ನಡೆಸುವ ಬಗ್ಗೆ ಮಾಹಿತಿ ನೀಡಿ, ಎಲ್ಲರೂ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಕೋರಿದರು.

ಕಾರ್ಯದರ್ಶಿ ಹರಿಣಾಕ್ಷಿ ಜೆ ಶೆಟ್ಟಿ, ಸೇವಾ ಬಳಗದ ಗೌರವ ಸಲಹೆಗಾರ ಜಯಪ್ರಕಾಶ್ ರೈ , ಸೇವಾ ಬಳಗದ ಜೊತೆ ಕಾರ್ಯದರ್ಶಿ ಭವಾನಿ ಶಂಕರ ಶೆಟ್ಟಿ , ವಿವೇಕಾನಂದ ಪಾಲಿಟೆಕ್ನಿಕ್ ಇದರ ನಿವೃತ್ತ ಪ್ರಾಂಶುಪಾಲ ಗೋಪಿನಾಥ ಶೆಟ್ಟಿ, ಸವಿತಾ ರೈ , ಪವಿತ್ರ ಪ್ರಸಾದ್, ವಿಕ್ಟರ್ ಮಾರ್ಟಿಸ್, ಪ್ರಶಾಂತ್ ಮುರ ಹಾಗೂ ಕರಿಯ ರಾಮಕುಂಜ ಸಹಿತ ಒಡಿಯೂರು ಶ್ರೀ ವಿವಿಧ ಬಳಗ ಇದರ ಸದಸ್ಯರು ಹಾಜರಿದ್ದರು.
ಧನ ಸಹಾಯ : ಗುರುದೇವಾ ಸೇವಾ ಬಳಗ ಇದರ ವತಿಯಿಂದ ಕೃಷ್ಣ ನಗರ ಹಿ.ಪ್ರ. ಶಾಲಾ ವಿದ್ಯಾರ್ಥಿನಿಯೋರ್ವರಿಗೆ ಹಾಗೂ ಶ್ರೀ ಮಹಾಲಿಂಗೇಶ್ವರ ದೇವಾಲಯ ಮುಂಭಾಗದ ಗೋ ಶಾಲೆಗೆ ಧನ ಸಹಾಯವನ್ನು ಅಧ್ಯಕ್ಷ ಸುಧೀರ್ ನೋಂಡಾ ನೀಡಿದರು.
ಈ ವೇಳೆ ಗೋ ಶಾಲೆ ಇದರ ಪ್ರಮುಖರು, ಹಿ.ಪ್ರಾ.ಶಾಲೆ ಕೃಷ್ಣ ನಗರ ಇಲ್ಲಿನ ವಿದ್ಯಾರ್ಥಿನಿ ಹಾಗೂ ಮುಖ್ಯೋಪಾಧ್ಯಾಯಿನಿ ಮರಿಯಮ್ಮ ಮತ್ತು ಸೇವಾ ಬಳಗದ ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿಗಳೆಲ್ಲರೂ ಹಾಜರಿದ್ದರು.

LEAVE A REPLY

Please enter your comment!
Please enter your name here