ಜೆಜೆಎಂ ಯೋಜನೆಯಡಿ ಪಡುವನ್ನೂರು ಮತ್ತು ಬಡಗನ್ನೂರು ಗ್ರಾಮದಲ್ಲಿ “ಹರ್ ಘರ್ ಜಲ್” ಘೋಷಣೆ

0

ಬಡಗನ್ನೂರು: ದ ಕ. ಜಿಲ್ಲಾ ಪಂಚಾಯತ್ ಜಲ ಜೀವನ್‌ ಮಿಷನ್‌ (ಜೆಜೆಎಂ) ಮತ್ತು ಸ್ವಚ್ಛ ಭಾರತ ಮಿಷನ್ ಯೋಜನೆಯಡಿ (ಗ್ರಾ) ಮಾಹಿತಿ, ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮಗಳು “ಹರ್ ಘರ್ ಜಲ್” ಘೋಷಣೆಯ ವಿಶೇಷ ಗ್ರಾಮ ಸಭೆ ಜೂ.21ರಂದು ಬಡಗನ್ನೂರಿನಲ್ಲಿ ನಡೆಯಿತು.

ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಕೆ, ಪಡುವನ್ನೂರು ಗ್ರಾಮಕ್ಕೆʼಹರ್ ಘರ್ ಜಲ್ʼ ಘೋಷಣೆ ಮಾಡಿದರು. ಉಪಾಧ್ಯಕ್ಷ ಸಂತೋಷ್ ಆಳ್ವ ಬಡಗನ್ನೂರು ಗ್ರಾಮಕ್ಕೆ ಹರ್ ಫರ್ ಜಲ್” ಘೋಷಣೆ ಮಾಡಿದರು. ಜೆಜೆಎಂ ಅಧಿಕಾರಿ ವಿಘ್ನೇಶ್ ಜೆಜೆಎಂ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ  ಗ್ರಾ.ಪಂ ಸದಸ್ಯರಾದ  ರವಿರಾಜ ರೈ ಸಜಂಕಾಡಿ, ಲಿಂಗಪ್ಪ ಗೌಡ ಮೋಡಿಕೆ, ವಸಂತ ಗೌಡ ಕನ್ನಯ, ರವಿಚಂದ್ರ ಸಾರೆಪ್ಪಾಡಿ, ಕುಮಾರ ಅಂಬಟೆಮುಲೆ, ವೆಂಕಟೇಶ ಕನ್ನಡ್ಕ, ಧರ್ಮೇಂದ್ರ ಕುಲಾಲ್ ಪದಡ್ಕ, ಹೇಮಾವತಿ ಮೋಡಿಕೆ, ಪುಷ್ಪಲತಾ ದೇವಕಜೆ, ಸುಶೀಲಾ , ಸುಜಾತ ಮೈಂದನಡ್ಕ, ಸವಿತಾ ನೇರೋತ್ತಡ್ಕ, ದಮಯಂತಿ ಕೆಮನಡ್ಕ, ಜ್ಯೋತಿ ಅಂಬಟೆಮೂಲೆ, ಕಲಾವತಿ ಗೌಡ ಪಟ್ಲಡ್ಕ, ಜಿ.ಪಂ. ಜೆ.ಇ ಸಂದೀಪ್, ಜೆಜೆಎಂ ಅಧಿಕಾರಿ ಅಜಿತ್  ಪಿಡಿಒ ವಸೀಮ ಗಂಧದ್ , ಗುತ್ತಿಗೆದಾರ ಉಸ್ಮಾನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here