ಮತದಾರರ ಜಾಗೃತಿ, ಲಂಚ, ಭ್ರಷ್ಟಾಚಾರ ವಿರುದ್ಧದ ಫಲಕ ಅನಾವರಣ

0

ಲಂಚ, ಭ್ರಷ್ಟಾಚಾರ ಮುಕ್ತ ಊರು, ತಾಲೂಕು, ರಾಜ್ಯ, ದೇಶ ನಮ್ಮದಾಗಲಿ

ಜನರು ಗುಲಾಮರಲ್ಲ – ರಾಜರು. ಜನಪ್ರತಿನಿಧಿ ರಾಜನಲ್ಲ – ಜನಸೇವಕ.
ಅಧಿಕಾರಿಗಳು-ಸಾರ್ವಜನಿಕ ಸೇವಕರು.
ಲಂಚ, ಭ್ರಷ್ಟಾಚಾರ ರಹಿತ ಉತ್ತಮ ಸೇವೆಯ ಆಡಳಿತ- ಜನಪ್ರತಿನಿಧಿಯ ಕರ್ತವ್ಯ.
ಅದನ್ನು ಕೇಳುವುದು, ಅಧಿಕಾರಿಗಳು ಲಂಚವಾಗಿ ಪಡೆದ ಹಣವನ್ನು ವಾಪಸು ಪಡೆಯುವುದು-ಜನರ ಹಕ್ಕು, ಕರ್ತವ್ಯ.

ಈ ಊರು ನಮ್ಮದು ಇಲ್ಲಿಯ ನೆಲ, ಜಲ, ವಾಯು, ಸಂಪತ್ತು, ಕಟ್ಟಡ, ಶಾಲೆ, ಸೊಸೈಟಿ, ರಸ್ತೆ, ಸಂಕ, ಆಡಳಿತ ಎಲ್ಲವೂ ನಮ್ಮದೇ, ನಮಗಾಗಿ ಇರುವಂತದ್ದು. ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮವರು, ನಮ್ಮ ಸೇವೆಗಾಗಿ ಇರುವವರು. ಇದು ಯಾವುದೇ ಪಕ್ಷದ ಸ್ವಾತಂತ್ರ್ಯವಲ್ಲ. ನಮ್ಮ ಜನರ ಸ್ವಾತಂತ್ರ್ಯ.

LEAVE A REPLY

Please enter your comment!
Please enter your name here