ಕೊಡಿಪ್ಪಾಡಿ:ಬಾವಂದಿರ ದೂರು- ಪರಸ್ಪರ ಹಲ್ಲೆ ಆರೋಪ – ಪ್ರಕರಣ ದಾಖಲು

0

ಪುತ್ತೂರು:ಪತ್ನಿಗೆ ಹಲ್ಲೆ ನಡೆಸಿದ್ದನ್ನು ಪ್ರಶ್ನಿಸಿದ ಆಕೆಯ ಸಹೋದರನಿಗೆ ಬಾವ ಹಲ್ಲೆ ನಡೆಸಿರುವುದಾಗಿ ಮತ್ತು ಹೆಂಡತಿಯ ತಮ್ಮ ತನಗೆ ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಬಾವಂದಿರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕೊಡಿಪ್ಪಾಡಿ ಗ್ರಾಮದ ಮೇಸ್ತ್ರಿ ಕೆಲಸಗಾರ ಶಶಿಧರ ಎಂಬವರು ನೀಡಿದ ದೂರಿನಂತೆ ನಾನು ನನ್ನ ಹೆಂಡತಿ ನಮಿತಾನಲ್ಲಿ ಮನೆ ಕೆಲಸ ಮಾಡುವಂತೆ ಹೇಳಿದ್ದೆ.ಆಕೆ ಕೋಪಗೊಂಡು ಅಂಗನವಾಡಿ ಕೆಲಸಕ್ಕೆ ಹೋಗಿದ್ದಳು.ಸಂಜೆ ಮನೆಯಲ್ಲಿದ್ದಾಗಲೂ ಮೊಬೈಲ್ ಹಿಡಿದು ಕುಳಿತ್ತಿದ್ದಳು.ಇದನ್ನು ವಿಚಾರಿಸಿದ್ದಕ್ಕೆ ಆಕೆಯ ತಮ್ಮ ಪ್ರವೀಣ್‌ಗೆ ಕರೆ ಮಾಡಿದ್ದಳು.ಸಂಜೆ ಬಾವ ಪ್ರವೀಣ್ ಬಂದು ನನಗೆ ಅವಾಚ್ಯವಾಗಿ ನಿಂದಿಸಿ, ಜಗುಲಿಯಲ್ಲಿದ್ದ ಮರ ಕಡಿಯುವ ಕತ್ತಿಯಿಂದ ಹಲ್ಲೆ ನಡೆಸಿ, ಕೊಲೆ ಬೆದರಿಕೆಯೊಡ್ಡಿದ್ದಾರೆ’ ಎಂದು ಆರೋಪಿಸಿದ್ದಾರೆ.ಇದೇ ಘಟನೆಯಲ್ಲಿ ಶಶಿಧರ್ ಅವರ ಬಾವ ಪ್ರವೀಣ್,ನನ್ನ ಅಕ್ಕ ನಮಿತಾ ಮತ್ತು ಆಕೆಯ ಮಕ್ಕಳಿಗೆ ಬಾವ ಶಶಿಧರ್ ಅವರು ಕತ್ತಿಯನ್ನು ತೋರಿಸಿ ಬೆದರಿಸುವ ಕುರಿತು ಅಕ್ಕ ನನಗೆ ಕರೆ ಮಾಡಿದ್ದರು.ಈ ನಿಟ್ಟಿನಲ್ಲಿ ನಾನು ಬಂದು ಬಾವನಲ್ಲಿ ಇದನ್ನು ಪ್ರಶ್ನಿಸಿದ್ದೇನೆ.ಆಗ ಬಾವ ಶಶಿಧರ್ ಅವರು ಕತ್ತಿಯಿಂದ ನನಗೆ ಹಲ್ಲೆ ನಡೆಸಿದ್ದಾರೆ’ ಎಂದು ಆರೋಪಿಸಿದ್ದಾರೆ.ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here