ದೇವಳದ ದ್ವಾರದ ಬಳಿ ಜನರಿಗೆ ಸಾಂತ್ವನ ಹೇಳಿದ ಶಾಸಕರು -ವಿಡಿಯೋ ವೈರಲ್

0

ಪುತ್ತೂರು: ಜೂ.25 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ಗದ್ದೆಯಲ್ಲಿ ಬಿತ್ತನೆ ಕಾರ್ಯಕ್ಕೆ ಸಿದ್ದತೆ ನಡೆದಿತ್ತು. ಬಿತ್ತನೆ ಕಾರ್ಯದಲ್ಲಿ ಭಾಗವಹಿಸಲು ಶಾಸಕ ಅಶೋಕ್ ಕುಮಾರ್ ರೈ ಬೆಳಿಗ್ಗೆ ದೇವಳಕ್ಕೆ ತೆರಳಿದ್ದರು. ಕಾರಿನಿಂದ ಇಳಿದ ಶಾಸಕರನ್ನು ಕೆಲವರು ಸ್ವಾಗತಿಸಿದರು. ಶಾಸಕರ ಜೊತೆ ಇದ್ದವರು ದೇವಳದ ಒಳಗೆ ನಡೆದರು. ಶಾಸಕರು ಮುಖ್ಯ ದ್ವಾರದ ಬಳಿಯೇ ನಿಂತುಕೊಂಡಿರುವುದನ್ನು ಗಮನಿಸಿದ ಕೆಲವರು ಶಾಸಕರೇ ಬನ್ನಿ ಎಂದು ಕರೆದಿದ್ದಾರೆ. ಬರ್ತೇನೆ ಇಲ್ಲಿ ನನ್ನನ್ನು ಕಾಣಲು ಕೆಲವರು ಬಂದಿದ್ದಾರೆ ಅವರನ್ನು ಮಾತನಾಡಿಸಿ ಬರುತ್ತೇನೆ ಎಂದು ಹೇಳಿದ್ದಾರೆ.

ದೇವಳದ ಒಳಪ್ರವೇಶ ದ್ವಾರದ ಬಳಿ ಒಂದಷ್ಟು ಜನರು ಅರ್ಜಿಯನ್ನು ಹಿಡಿದು ಶಾಸಕರಿಗಾಗಿ ಕಾಯುತ್ತಿದ್ದರು. ದೇವಳಕ್ಕೆ ಶಾಸಕರು ಬರುತ್ತಾರೆ ಎಂದು ಸುದ್ದಿ ತಿಳಿದು ಅಲ್ಲಿಗೆ ಬಂದಿದ್ದ ಅವರನ್ನು ಕಂಡ ಕೂಡಲೇ ಶಾಸಕರು ಅವರ ಸಂಕಷ್ಟಗಳನ್ನು ಆಲಿಸಿದರು. ಮನವಿ ಪತ್ರವನ್ನು ಪಡೆದುಕೊಂಡು ಕೆಲವು ವಿಷಯಗಳಿಗೆ ಸ್ಥಳದಲ್ಲೇ ಪರಿಹಾರವನ್ನು ನೀಡಿದರು. ಹೊರಗಡೆ ತನಗಾಗಿ ಕಾಯುತ್ತಿದ್ದವರ ಕೆಲಸವನ್ನು ಮಾಡಿದ ಬಳಿಕ ಶಾಸಕರು ದೇವರ ದರ್ಶನ ಪಡೆಯಲು ತೆರಳಿದರು. ಶಾಸಕರು ದೇವಸ್ಥಾನದ ದ್ವಾರದ ಬಳಿ ನಿಂತು ಜನರ ಸಂಕಷ್ಟವನ್ನು ಆಲಿಸುತ್ತಿರುವ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಅನೇಕ ಮಂದಿ ಶಾಸಕರ ನಡೆಗೆ ಶಹಬ್ಬಾಸ್ ಹೇಳಿದ್ದಾರೆ.

LEAVE A REPLY

Please enter your comment!
Please enter your name here