ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಎನ್‌ಡಿಎ ಕೋಚಿಂಗ್ ತರಗತಿಗಳು ಆರಂಭ

0

ದೇಶ ಸೇವೆಯಲ್ಲ್ಲಿ ಸಿಗುವ ತೃಪ್ತಿ ಬೇರೆಲ್ಲೂ ಇಲ್ಲ : ಸಾರ್ಜೆಂಟ್ ರಾಮಚಂದ್ರ ಪುಚ್ಚೇರಿ


ಪುತ್ತೂರು: ದೇಶ ಸೇವೆಯಲ್ಲ್ಲಿ ಸಿಗುವ ತೃಪ್ತಿ ಬೇರೆ ಯಾವ ಕೆಲಸದಲ್ಲೂ ಸಿಗುವುದಿಲ್ಲ. ಸೇನೆಯ ಸಮವಸ್ತ್ರ ಧರಿಸಿದರೆ ಅದು ಒಂದು ಶಕ್ತಿ ಕೊಡುತ್ತದೆ. ಅದರ ಜೊತೆಗೆ ನಮಗೆ ಸಿಗುವ ಗೌರವ ನಮ್ಮನು ಒಂದು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ನಿವೃತ್ತ ಸೇನಾಧಿಕಾರಿ ಸಾರ್ಜೆಂಟ್ ರಾಮಚಂದ್ರ ಪುಚ್ಚೇರಿ ಹೇಳಿದರು.


ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ವಿದ್ಯಾಸಂಸ್ಥೆಗಳಲ್ಲಿ ಒಂದಾದ ಬಪ್ಪಳಿಗೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದ ಎನ್‌ಡಿಎ ಕೋಚಿಂಗ್ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.


ಕಾಲೇಜಿನ ಇಂಗ್ಲೀಷ್ ಉಪನ್ಯಾಸಕ ಹಾಗೂ ಎನ್ ಡಿ ಎ ಕೋಚಿಂಗ್ ತರಗತಿಗಳ ಸಂಯೋಜಕ ಆಶಿಕ್ ಬಾಲಚಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲೆ ಸುಚಿತ್ರಾ ಪ್ರಭು ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು. ಪ್ರಯೋಗಾಲಯ ಸಹಾಯಕ ಕೌಶಿಕ್ ಸಹಕರಿಸಿದರು.

LEAVE A REPLY

Please enter your comment!
Please enter your name here