ಆಲಂಕಾರು: ಮನೆ ಮಗನ ಸಾವಿನ ಬಳಿಕ ಸಂಕಷ್ಟದಲ್ಲಿರುವ ಕುಟುಂಬ-ಸಹಾಯದ ನಿರೀಕ್ಷೆಯಲ್ಲಿ ತಂದೆ, ಗರ್ಭಿಣಿ ಪತ್ನಿ

0

ಕಡಬ: ಮನೆಯ ಆಧಾರಸ್ತಂಭವಾಗಿದ್ದ ಮನೆ ಮಗ ಅಗಲಿದ ಬಳಿಕ ಆತನ ಕುಟುಂಬ ಕಂಗಾಲಾಗಿದೆ. ಆಲಂಕಾರು ಗ್ರಾಮದ ನಗ್ರಿ ನಿವಾಸಿ ಪದ್ಮಯ್ಯ ಗೌಡರ ಪುತ್ರ ಹರಿಪ್ರಸಾದ್(28ವ.) ಎಂಬ ಯುವ ಕಾರ್ಮಿಕ ಇತ್ತೀಚೆಗೆ ಕೆಲಸ ನಿರ್ವಹಿಸುತ್ತಿದ್ದ ವೇಳೆ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದು ಬಳಿಕ ಅವರ ಬಡ ಕುಟುಂಬ ಹೈರಾಣಾಗಿದೆ.

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಈ ಬಡ ಕುಟುಂಬದ ಸಮಸ್ಯೆ ನಿವಾರಿಸುವಲ್ಲಿ ದಾನಿಗಳ ನೆರವಿನ ಅಗತ್ಯವಿದೆ. ಹರಿಪ್ರಸಾದ್ ಅವರು ಜೂ.2ರಂದು ನೆಟ್ಟಣ ಸಮೀಪ ಮೇರೊಂಜಿ ಎಂಬಲ್ಲಿ ಕಟ್ಟಡ ಕಾಮಗಾರಿ ನಿರ್ವಹಣೆ ವೇಳೆ ಆಕಸ್ಮಿಕವಾಗಿ ಮಹಡಿಯಿಂದ ಬಿದ್ದು ಮೃತಪಟ್ಟಿದ್ದರು. ಮನೆಗೆ ಆಧಾರಸ್ತಂಭವಾಗಿದ್ದ ಯುವಕನನ್ನು ಕಳೆದುಕೊಂಡ ಪತ್ನಿ ಈಗ ಮೂರು ತಿಂಗಳ ಗರ್ಭಿಣಿ. ಯುವಕ ಹರಿಪ್ರಸಾದ್‌ರವರ ತಂದೆಯೂ ಅನಾರೋಗ್ಯ ಪೀಡಿತರಾಗಿ ಪರಿತಪಿಸುತ್ತಿದ್ದಾರೆ. ಮನೆಯಲ್ಲಿದ್ದ ದುಡಿಯುವ ವ್ಯಕ್ತಿ ಮೃತಪಟ್ಟ ಬಳಿಕ ಜಿವನೋಪಾಯಕ್ಕೆ ಯಾವುದೇ ಆದಾಯವಿಲ್ಲದೆ ಕುಟುಂಬ ಈಗ ತುತ್ತು ಅನ್ನಕ್ಕೆ ಪರದಾಡುವಂತಾಗಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಸಹೃದಯಿ ನಾಗರೀಕರು, ಕಟ್ಟಡ ಕಾರ್ಮಿಕರು ಮೃತರ ಪತ್ನಿಯ ಹೆಸರಿನಲ್ಲಿರುವ ಕೆನರಾ ಬ್ಯಾಂಕಿನ ಆಲಂಕಾರು ಶಾಖೆಯ ಉಳಿತಾಯ ಖಾತೆಗೆ ಧನಸಹಾಯ ಜಮೆ ಮಾಡುವಂತೆ ಕಟ್ಟಡ ಕಾರ್ಮಿಕರ ಪರವಾಗಿ ಕಾರ್ಮಿಕರ ಸಂಘದ ಆಲಂಕಾರು ವಲಯಾಧ್ಯಕ್ಷ ಜನಾರ್ದನ ಗೌಡ ಕಯ್ಯಪೆ ವಿನಂತಿ ಮಾಡಿಕೊಂಡಿದ್ದಾರೆ.

ASHWINI, CANARA BANK ALANKAR BRANCH, SAVING BANK A/C NO 110124967776, IFSC .No:CNRB0010204, MICR Code: 575015109, Foreign Exchange/ Swift Code-CNRBINBBBFD

LEAVE A REPLY

Please enter your comment!
Please enter your name here