![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಆಟೋ ರಿಕ್ಷಾವೊಂದರ ಹಿಂದಕ್ಕೆ ಕ್ರೇನ್ವೊಂದು ಡಿಕ್ಕಿಯಾದ ಘಟನೆ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ತೆಂಕಿಲ ಬೈಪಾಸ್ ಒಕ್ಕಲಿಗ ಗೌಡ ಸಮದಾಯ ಭವನದ ಬಳಿ ಜೂ.29ರಂದು ನಡೆದಿದ್ದು, ಅಪಘಾತದಿಂದ ಆಟೋ ರಿಕ್ಷಾ ಚಾಲಕ ತೀವ್ರ ಗಾಯಗೊಂಡಿದ್ದಾರೆ.
ಜಾನ್ ಮಹಮ್ಮದ್ ಎಂಬವರು ಚಲಾಯಿಸುತ್ತಿದ್ದ ಕ್ರೇನ್ ಮುಂದಿನಿಂದ ಹೋಗುತ್ತಿದ್ದ ಆಟೋ ರಿಕ್ಷಾಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು, ಅದರಲ್ಲಿದ್ದ ಪ್ರಯಾಣಿಕರಾದ ತೆಂಕಿಲ ಅಭಯ ಮಾರ್ಬಲ್ ಬಳಿಯ ನಿವಾಸಿ ಸಲೀಲಾ ಕುಮಾರಿ ಕೆ (70ವ), ಲವಿತ್(12ವ) ಎಂಬವರು ಗಾಯಗೊಂಡಿದ್ದು ಅವರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋರಿಕ್ಷಾ ಚಾಲಕ ಟಿ.ವಿಶ್ವನಾಥ್ ಅವರು ತೀವ್ರ ಗಾಯಗೊಂಡಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.