ಪುತ್ತೂರು ನ್ಯಾಯಾಲಯದಲ್ಲಿ ಮೆಗಾ ಲೋಕ ಅದಾಲತ್

0

396 ಪ್ರಕರಣ ಇತ್ಯರ್ಥ
ರೂ.3.8 ಕೋಟಿ ಪರಿಹಾರ ಮೊತ್ತ ವಿತರಣೆಗೆ ಆದೇಶ

ನ್ಯಾಯಾಲಯಗಳಲ್ಲಿ ಇತ್ಯರ್ಥವಾದ ಪ್ರಕರಣಗಳು
ಜಿಲ್ಲಾ ನ್ಯಾಯಾಲಯ-32
ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಲಯ-84
ಹೆಚ್ಚುವರಿ ಸಿವಿಲ್ ನ್ಯಾಯಾಲಯ-69
ಪ್ರಧಾನ ಸಿವಿಲ್, ಜೆಎಂಎ-ಸಿ ನ್ಯಾಯಾಲಯ-37
ಅಪರ ಸಿವಿಲ್, ಜೆಎಂಎ-ಸಿ ನ್ಯಾಯಾಲಯ-116
2ನೇ ಹೆಚ್ಚುವರಿ ಸಿವಿಲ್, ಜೆಎಂಎ- ಸಿ ನ್ಯಾಯಾಲಯ-74

ಪುತ್ತೂರು:ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಲು ಜು.8ರಂದು ಪುತ್ತೂರಿನ ನ್ಯಾಯಾಲಯದಲ್ಲಿ ನಡೆದ ಮೆಗಾ ಲೋಕ ಅದಾಲತ್‌ನಲ್ಲಿ ಒಟ್ಟು 973 ಪ್ರಕರಣಗಳ ಪೈಕಿ 396 ಪ್ರಕರಣಗಳನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಿ ಫಲಾನುಭವಿಗಳಿಗೆ ರೂ.3,80,37,368 ಪರಿಹಾರ ಮೊತ್ತವನ್ನು ವಿತರಿಸಲು ಆದೇಶಿಸಲಾಗಿದೆ.


ಮೆಗಾ ಲೋಕ ಅದಾಲತ್‌ನಲ್ಲಿ ವ್ಯಾಜ್ಯ ಪೂರ್ವ ಮತ್ತು ನ್ಯಾಯಾಲಯದಲ್ಲಿ ಬಾಕಿ ಇರುವ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸುವ, ಚೆಕ್ ಬೌನ್ಸ್, ವಿಮಾ ಹಣದ ಪ್ರಕರಣ, ಬ್ಯಾಂಕ್ ಹಾಗೂ ಇತರ ಕಂಪನಿಗಳೊಂದಿಗೆ ಇರುವ ವ್ಯಾಜ್ಯಗಳಲ್ಲಿ ಕಕ್ಷಿದಾರರು ಒಪ್ಪುವ ರೀತಿಯಲ್ಲಿ ಇತ್ಯರ್ಥ ಮಾಡುವ ಪ್ರಯತ್ನ ನಡೆಯಿತು.


ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಸರಿತಾ ಡಿ ಅವರ ನ್ಯಾಯಾಲಯದಲ್ಲಿ 32 ಪ್ರಕರಣಗಳಲ್ಲಿ 16 ಪ್ರಕರಣ ಇತ್ಯರ್ಥಗೊಂಡಿದೆ.ರೂ.54,75,000 ಪರಿಹಾರ ವಿತರಣೆಗೆ ಆದೇಶ ಆಗಿದೆ.
ಪುತ್ತೂರು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿ ಆರ್.ಪಿ ಗೌಡ ಅವರ ನ್ಯಾಯಾಲಯದಲ್ಲಿ 210 ಪ್ರಕರಣಗಳಲ್ಲಿ 84 ಇತ್ಯರ್ಥಗೊಂಡಿದ್ದು ರೂ..1,16,52,800 ಪರಿಹಾರ ವಿತರಣೆಗೆ ಆದೇಶ ಆಗಿದೆ.ಅಪರ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಜೆಎಮ್‌ಎಫ್‌ಸಿ ಪ್ರಿಯಾ ಜೋವಲೆಕರ್ ಅವರ ನ್ಯಾಯಾಲಯದಲ್ಲಿ 110 ಪ್ರಕರಣಗಳಲ್ಲಿ 69 ಪ್ರಕರಣ ಇತ್ಯರ್ಥಗೊಂಡಿದ್ದು, ರೂ.1,57,85,400 ವಿತರಣೆಗೆ ಆದೇಶ ಆಗಿದೆ.ಪ್ರಧಾನ ಸಿವಿಲ್ ನ್ಯಾಯಾಲಯ, ಜೆಎಮ್‌ಎಫ್‌ಸಿ ನ್ಯಾಯಾಧೀಶೆ ಅರ್ಚನಾ ಉನ್ನಿತಾನ್ ಅವರ ನ್ಯಾಯಾಲಯದಲ್ಲಿ 216 ಪ್ರಕರಣಗಳಲ್ಲಿ 37 ಪ್ರಕರಣಗಳು ಇತ್ಯರ್ಥಗೊಂಡಿದ್ದು ರೂ.42,33,349 ವಿತರಣೆಗೆ ಆದೇಶ ಆಗಿದೆ.ಅಪರ ಸಿವಿಲ್ ನ್ಯಾಯಾಧೀಶ ಮತ್ತು ಜೆಎಮ್‌ಎಫ್‌ಸಿ ಶಿವಣ್ಣ ಹೆಚ್.ಆರ್ ಅವರ ನ್ಯಾಯಾಲಯದಲ್ಲಿ 248 ಪ್ರಕರಣಗಳಲ್ಲಿ 116 ಇತ್ಯರ್ಥಗೊಂಡಿದ್ದು, ರೂ.6,24,014 ವಿತರಣೆಗೆ ಆದೇಶ ಆಗಿದೆ.2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಮತ್ತು ಜೆಎಮ್‌ಎಫ್‌ಸಿ ಯೋಗೇಂದ್ರ ಶೆಟ್ಟಿ ಅವರ ನ್ಯಾಯಾಲಯದಲ್ಲಿ 157 ಪ್ರಕರಣಗಳಲ್ಲಿ 74 ಪ್ರಕರಣ ಇತ್ಯರ್ಥಗೊಂಡಿದ್ದು, ರೂ.2,69,205 ವಿತರಣೆಗೆ ಆದೇಶ ಆಗಿದೆ.ಪುತ್ತೂರಿನ 6 ನ್ಯಾಯಾಲಯಗಳಲ್ಲಿ ಒಟ್ಟು 396 ಪ್ರಕರಣಗಳು ಇತ್ಯರ್ಥಗೊಂಡಿದ್ದು, ರೂ.3,80,37,368 ಮೊತ್ತವನ್ನು ಫಲಾನುಭವಿಗಳಿಗೆ ಪರಿಹಾರವಾಗಿ ವಿತರಿಸಲು ಆದೇಶಿಸಲಾಗಿದೆ.ಪ್ರಕರಣಗಳ ಇತ್ಯರ್ಥಕ್ಕೆ ಸಂಧಾನಕಾರರಾಗಿ ನ್ಯಾಯವಾದಿಗಳಾದ ತೇಜಸ್ ಯು, ಕಿರಣ್ ಅಳಜೆ, ಸುಮಾ ಟಿ.ಆರ್, ವಿಲ್ಮ ಸುವರೀಸ್, ಸುರೇಂದ್ರ ಡಿ, ಅನೀಶ್ ಪಿ ಅವರು ಸಹಕರಿಸಿದರು.ಸದ್ರಿ ವ್ಯಾಜ್ಯಗಳಲ್ಲಿ ಸಂಧಾನಕಾರ ವಕೀಲರನ್ನು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ.ವಿ.ಅವರು ನೇಮಕ ಮಾಡಿದ್ದರು.

ವರ್ಚುವಲ್ ಮತ್ತು ಫಿಸಿಕಲ್ ಮೋಡ್ ಮೂಲಕ ಪೂರ್ವ ದಾವೆ ಪ್ರಕರಣಗಳಲ್ಲಿ ಬ್ಯಾಂಕ್ ಸೂಟ್‌ಗೆ ಸಂಬAಧಿಸಿ 12 ಪ್ರಕರಣದಲ್ಲಿ 12 ಪ್ರಕರಣವೂ ಇತ್ಯರ್ಥಗೊಂಡಿತ್ತು. ಸಂಯೋಜಿತ ಅಪರಾಧಗಳ ಪೈಕಿ 13 ಪ್ರಕರಣದಲ್ಲಿ 9 ಇತ್ಯರ್ಥಗೊಂಡಿದೆ. 190 ಎನ್.ಐ ಆಕ್ಟ್ ಪ್ರಕರಣದಲ್ಲಿ 13 ಪ್ರಕರಣ ಇತ್ಯರ್ಥಗೊಂಡಿತ್ತು. ಮನಿ ರಿಕವರ್ ಸೂಟ್‌ನಲ್ಲಿ 4ರಲ್ಲಿ 1 ಪ್ರಕರಣ ಇತ್ಯರ್ಥಗೊಂಡಿದೆ.ಎಮ್‌ಎಸಿಟಿ/ಎಮ್‌ವಿಸಿ ಪ್ರಕರಣದಲ್ಲಿ 236ರ ಪೈಕಿ 80 ಇತ್ಯರ್ಥಗೊಂಡಿದೆ.ವೈವಾಹಿಕ ವಿವಾದ ಪ್ರಕರಣದಲ್ಲಿ 7ರಲ್ಲಿ 2 ಇತ್ಯರ್ಥಗೊಂಡಿದೆ.ಪಿಟಿಷನ್ ಸೂಟ್ ಪ್ರಕರಣದಲ್ಲಿ 25ರಲ್ಲಿ 2 ಇತ್ಯರ್ಥಗೊಂಡಿದೆ.ಇತರೆ ಪ್ರಕರಣಗಳಲ್ಲಿ 5ರಲ್ಲಿ 2 ಇತ್ಯರ್ಥಗೊಂಡಿದೆ.ಸಿವಿಲ್ ಪ್ರಕರಣದಲ್ಲಿ 98ರಲ್ಲಿ 7 ಇತ್ಯರ್ಥಗೊಂಡಿದೆ.ಕ್ರಿಮಿನಲ್‌ಗೆ ಸಂಬAಧಿಸಿ ಸಣ್ಣಪುಟ್ಟ ಪ್ರಕರಣಗಳಲ್ಲಿ (ಕೆಪಿ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ, ಐಎಂವಿಸಿ ಕಾಯ್ದೆ, ಸೆಕ್ಷನ್ 279, 337 ರಲ್ಲಿ 322 ಪ್ರಕರಣದಲ್ಲಿ 276 ಪ್ರಕರಣ ಇತ್ಯರ್ಥಗೊಂಡಿದೆ. ವಿವಿಧ ಕ್ರಿಮಿನಲ್ ಪ್ರಕರಣಗಳಲ್ಲಿ 50ರಲ್ಲಿ 4 ಪ್ರಕರಣ ಇತ್ಯರ್ಥಗೊಂಡಿದೆ.

LEAVE A REPLY

Please enter your comment!
Please enter your name here