ರಾಮಕುಂಜ: ಒಡಿಯೂರು ಸ್ವಾಮೀಜಿ ಜನ್ಮ ದಿನಾಚರಣೆ, ಮೊಗೇರ ಸಂಘದಿಂದ ಸ್ವಚ್ಛತಾ ಕಾರ್ಯಕ್ರಮ

0

ಪುತ್ತೂರು: ಒಡಿಯೂರು ಗ್ರಾಮ ವಿಕಾಸ ಯೋಜನೆ ಘಟ ಸಮಿತಿ ಕುಂಡಾಜೆ ವತಿಯಿಂದ ಗುರುದೇವಾನಂದ ಸ್ವಾಮೀಜಿಯವರ 62ನೇ ಜನ್ಮದಿನಾಚರಣೆ ಗ್ರಾಮೋತ್ಸವದ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮವು ಜು.9ರಂದು ಕುಂಡಾಜೆ ಹಿ.ಪ್ರಾ.ಶಾಲೆ ರಾಮಕುಂಜ ಇಲ್ಲಿ ನಡೆಯಿತು. ಮೊಗೇರ ಸಂಘ ಆಲಂಕಾರು ಮಂಡಲ ಮತ್ತು ತನ್ನಿಮಾನಿಗ ಮೊಗೇರ ಮಹಿಳಾ ಸಂಘದ ಸದಸ್ಯರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊಗೇರ ಸಂಘದ ಹಿರಿಯ ಸಲಹೆಗಾರ ಕರಿಯ ಗಾಣಂತಿ, ಸಂಘದ ಉಪಾಧ್ಯಕ್ಷ ತಾರನಾಥ.ಕೆ ಇವರು ಉದ್ಘಾಟನಾ ಭಾಷಣದ ಮೂಲಕ ಶುಭ ಹಾರೈಸಿದರು.

ಶ್ರಮದಾನದಲ್ಲಿ ಸಂಘದ ಅಧ್ಯಕ್ಷ ಬಾಲಕೃಷ್ಣ ಕೇಪುಳು, ಕೃಷ್ಣ ಗಾಣಂತಿ, ಕಾರ್ಯದರ್ಶಿ ಸಂದೀಪ್ ಪಾಂಜೋಡಿ, ಶೀನಪ್ಪ ದೇರೋಡಿ , ಮೋನಪ್ಪ ಕೊನೆಮಜಲು, ಕಮಲ ಕಡಿರಡ್ಕ, ಲಲಿತಾ ಪುರುಷಬೆಟ್ಟು, ಹರೀಶ್ ಕೆರ್ನಡ್ಕ, ಗಿರಿಯಪ್ಪ ಕುಕ್ಕೇಜಾಲು, ಲೋಲಾಕ್ಷಿ ಮರುವಂತಿಲ, ಶಕುಂತಲಾ ಗಾಣಂತಿ, ಗುರುವಪ್ಪ ಕುಂಡಾಜೆ, ಜಗದೀಶ್ ಕೊಂಡಪ್ಪಾಡಿ, ಕವಿತಾ ಗಾಣಂತಿ, ಮಹಿಳಾ ಸಂಘದ ಅಧ್ಯಕ್ಷೆ ಅಕ್ಷತಾ ಕುಕ್ಕೇಜಾಲು, ಪ್ರೇಮ್ ಮರುವಂತಿಲ, ಜನಾರ್ಧನ ಗಾಣಂತಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here