ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ 

0

ಅಧ್ಯಕ್ಷ : ಸೀತಾರಾಮ ಗೌಡ, ಕಾರ್ಯದರ್ಶಿ: ದಾಮೋದರ ಕಜೆ, ಖಜಾಂಜಿ: ಸುಧೀರ್ ರೈ

ಪುತ್ತೂರು: ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಸಂಘದ ಸಭೆಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಪೇರಲ್ತಡ್ಕ ಸ.ಹಿ.ಪ್ರಾ.ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಸೀತಾರಾಮ ಗೌಡ ಮಿತ್ತಡ್ಕ ಆಯ್ಕೆಯಾಗಿದ್ದಾರೆ.‌ ಪ್ರಧಾನ ಕಾರ್ಯದರ್ಶಿಯಾಗಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದಾಮೋದರ ಕಜೆ, ಖಜಾಂಜಿಯಾಗಿ ಪಾಣಾಜೆ ಸುಬೋಧ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಸುಧೀರ್ ರೈ ಆಯ್ಕೆಯಾಗಿದ್ದಾರೆ.

ಗೌರವಾಧ್ಯಕ್ಷರಾಗಿ  ಮೋನಪ್ಪ ಪಟ್ಟೆ, ಕಾರ್ಯಾಧ್ಯಕ್ಷರಾಗಿ ಚಕ್ರಪಾಣಿ ಬಜತ್ತೂರು, ಹಿರಿಯ ಉಪಾಧ್ಯಕ್ಷರಾಗಿ ಕೃಷ್ಣಯ್ಯ ಕಬಕ, ಉಪಾಧ್ಯಕ್ಷರುಗಳಾಗಿ ಸುಧಾಕರ ರೈ, ದೇವಿಪ್ರಕಾಶ್ ಶೆಟ್ಟಿ, ನವೀನ್ ರೈ, ಸುಕೇಶ್ ರೈ, ಸುನೀತಾ, ಐವಿ ಗ್ರೆಟ್ಟಾ ಆಯ್ಕೆಯಾದರು. ಜಂಟಿ ಕಾರ್ಯದರ್ಶಿಗಳಾಗಿ ಬಾಲಕೃಷ್ಣ ಪೆರ್ನಾಜೆ, ಸಂತೋಷ್ ಬೆಳ್ಳಿಪ್ಪಾಡಿ, ಪುಷ್ಪರಾಜ್ ಸುದಾನ, ಸಂಘಟನಾ ಕಾರ್ಯದರ್ಶಿಗಳಾಗಿ ನರೇಶ್ ಲೋಬೋ, ಕುಸುಮ, ಅಶ್ರಫ್, ಎಲಿಜಬೆತ್, ಸಿದ್ದಲಿಂಗಮ್ಮ, ಕ್ರೀಡಾ ಕಾರ್ಯದರ್ಶಿಗಳಾಗಿ ಚಂದ್ರಕಲಾ ಬೆಟ್ಟಂಪಾಡಿ, ಪವಿತ್ರ ಕಬಕ , ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರಮೇಶ್ ನೆಟ್ಟಣಿಗೆಮುಡ್ನೂರು, ವಾಣಿಶ್ರೀ ಇರ್ದೆ ಉಪ್ಪಳಿಗೆ, ಪತ್ರಿಕಾ ಕಾರ್ಯದರ್ಶಿಯಾಗಿ ನಿರಂಜನ್ ಬೆಥನಿ ದರ್ಬೆ, ಆಂತರಿಕ ಲೆಕ್ಕ ಪರಿಶೋಧಕರಾಗಿ ವಿಜಯಪ್ರಭು ಆಯ್ಕೆಯಾದರು. ‌

ಸಭೆಯಲ್ಲಿ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ನಡೆಸಲಾಗುವ ವಿವಿಧ ಕ್ರೀಡಾ ಚಟುವಟಿಕೆಗಳ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಯಿತು.

LEAVE A REPLY

Please enter your comment!
Please enter your name here