ನಾಳೆ(ಜು.31) ಶಿಕ್ಷಕಿ ವಾಣಿ ಯಂ.ಸೇವಾ ನಿವೃತ್ತಿ

0

ರಾಮಕುಂಜ: ರಾಮಕುಂಜ ಗ್ರಾಮದ ರಾಮಕುಂಜ ಮತ್ತು ಕುಂಡಾಜೆ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕೊಡುಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಮೋದೂರು ಸರಕಾರಿ ಕಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿರುವ ವಾಣಿ ಯಂ.ಅವರು ಜು.31 ರಂದು ನಿವೃತ್ತರಾಗಲಿದ್ದಾರೆ.

ರಾಮಕುಂಜ ಗ್ರಾಮದ ಹೂಂತಿಲ ನಿವಾಸಿ, ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ಕೇಕುಣ್ಣಾಯ ಹಾಗೂ ಗುಲಾಬಿ ದಂಪತಿ ಪುತ್ರಿಯಾದ ವಾಣಿ ಯಂ.ಅವರು ರಾಮಕುಂಜ ಸಂಸ್ಕೃತ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಆರಂಭಿಸಿದ್ದರು. 1996 ರಿಂದ 1997ರ ತನಕ ಸರಕಾರಿ ಹಿ.ಪ್ರಾ.ಶಾಲೆ ರಾಮಕುಂಜ ಹಾಗೂ ಸರಕಾರಿ ಕಿ.ಪ್ರಾ.ಶಾಲೆ ಕುಂಡಾಜೆ ಇಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಕೊಡಗು ಜಿಲ್ಲೆಯ ಶನಿವಾರ ಸಂತೆ, ಕೂಡಿಗೆ, ಮುಳ್ಳುಸೋಗೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಸೋಮವಾರಪೇಟೆ ತಾಲೂಕಿನ ಮೋದೂರು ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 27ವರ್ಷ ಶಿಕ್ಷಕಿಯಾಗಿ ಸೇವೆ ಸಲ್ಲಿಸಿರುವ ಅವರು ಜು.31ರಂದು ನಿವೃತ್ತರಾಗಲಿದ್ದಾರೆ.

LEAVE A REPLY

Please enter your comment!
Please enter your name here