ಪೈಂಟರ್ ರಾಮ ಸಾಮೆತ್ತಡ್ಕ ನಿಧನ

0

ಪುತ್ತೂರು: ಸಾಮೆತ್ತಡ್ಕ ನಿವಾಸಿ , ವೃತ್ತಿಯಲ್ಲಿ ಪೈಂಟರ್ ಆಗಿದ್ದ ರಾಮ (37) ಹೃದಯಾಘಾತದಿಂದ ಆ.4ರ ಮುಂಜಾನೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆ ಇಲ್ಲಿ ನಿಧನರಾಗಿದ್ದಾರೆ.
ಆ.3ರ ಸಂಜೆ ವೇಳೆ ಅವರಿಗೆ ಹಠಾತ್ತನೆ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆ ಗೆ ಕರೆದುಕೊಂಡು ಹೋಗಲಾಗಿದ್ದು ,ಆ ಬಳಿಕ ಧನ್ವಂತರಿ ಆಸ್ಪತ್ರೆಗೆ , ಅಲ್ಲಿಂದ ಆದರ್ಶ ಆಸ್ಪತ್ರೆ ಇಲ್ಲಿಗೆ ದಾಖಲಿಸಲಾಗಿದ್ದು , ವೈದ್ಯರ ಸೂಚನೆ ಮೇರೆಗೆ ಮಧ್ಯ ರಾತ್ರಿ ವೇಳೆ ಇನ್ನೂ ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆ ಗೆ ಕರೆದುಕೊಂಡು ಹೋಗಲಾಗಿದೆ. ದುರದೃಷ್ಟವಶಾತ್ ಆ.4 ರ ಬೆಳಗ್ಗೆ ಅವರು ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಮೃತ ಪಟ್ಟಿದ್ದಾರೆಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.

ಮೃತರು ವಿವಾಹಿತರಾಗಿದ್ದು, ಪತ್ನಿ ಉಷಾ ,ತಾಯಿ ಹುಕ್ರು , ನಗರಸಭೆಯ ವಾಹನ ಚಾಲಕರಾಗಿರುವ ಕಾಂತಪ್ಪ ಸಾಮೆತ್ತಡ್ಕ ಸಹಿತ ನಾಲ್ವರು ಸಹೋದರರು ಹಾಗೂ ಮೂವರು ಸಹೋದರಿಯರನ್ನೂ ಅಗಲಿದ್ದಾರೆ. ಮೃತರ ಮನೆಗೆ ಪುತ್ತಿಲ ಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ , ನಗರಸಭಾ ಸದಸ್ಯರಾದ ಮನೋಹರ್ ಕಲ್ಲಾರೆ ಹಾಗೂ ಬಾಲಚಂದ್ರ ಬೆದ್ರಾಳ , ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನಸ್ , ಪೌಲ್ ಸಾಮೆತ್ತಡ್ಕ , ಅಲ್ವಿನ್, ಬಾಲಕೃಷ್ಣ, ಸುರೇಶ್ ಸಾಲ್ಯಾನ್ , ಬ್ಯಾಂಕ್ ಉದ್ಯೋಗಿ ಕೊರಗಪ್ಪ ಸಹಿತ ಹಲವರು ಭೇಟಿ ನೀಡಿ ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here