ಆರ್ಲಪದವು: ವಾರದ ಹಿಂದೆ ವಿಷ ಪದಾರ್ಥ ಸೇವಿಸಿದ ಕೂಲಿ ಕಾರ್ಮಿಕ ಮೃತ್ಯು

0

ಪುತ್ತೂರು: ವಾರದ ಹಿಂದೆ ವಿಷ ಪದಾರ್ಥ ಸೇವಿಸಿದ ಆರ್ಲಪದವು ನಿವಾಸಿ ಕೂಲಿ ಕಾರ್ಮಿಕರೊಬ್ಬರು ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟ ಘಟನೆ ಆ.10ರಂದು ವರದಿಯಾಗಿದೆ.

ಆರ್ಲಪದವು ನಿವಾಸಿ ಕೂಲಿ ಕಾರ್ಮಿಕ ಚನಿಯಪ್ಪ ನಾಯ್ಕ(54ವ)ರವರು ವಿಷ ಪದಾರ್ಥ ಸೇವಿಸಿ ಮೃತಪಟ್ಟವರು. ಅವರು ಆರ್ಲಪದವು ಜ್ಯೋತಿ ಸ್ಟೋರ್‌ನಲ್ಲಿ ಭಾರದ ಸಾಮಾಗ್ರಿಗಳನ್ನು ಹೊರುವ ಕೆಲಸ ಮಾಡುತ್ತಿದ್ದು ಆ.2ರಂದು ಯಾವುದೋ ಕಾರಣಕ್ಕೆ ವಿಷ ಪದಾರ್ಥ ಸೇವಿಸಿದ್ದರೆನ್ನಲಾಗಿದೆ. ಅಸ್ವಸ್ಥಗೊಂಡ ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆ ತಂದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್‌ಲಾಕ್ ಆಸ್ಪತ್ರೆಗೆ ದಾಖಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂಧಿಸದೆ ಆ.10ರಂದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

LEAVE A REPLY

Please enter your comment!
Please enter your name here