ಅಧಿಕ ಮಾಸದ ವಿಶೇಷ ಕಾರ್ಯಕ್ರಮದಲ್ಲಿ ಆಪ್ತ ಚಂದ್ರಮತಿ ಮುಳಿಯರಿಂದ ಹರಿಕಥೆ

0

ಪುತ್ತೂರು: ಇಲ್ಲಿನ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನದಲ್ಲಿ ಅಧಿಕ ಮಾಸದ ವಿಶೇಷ ಕಾರ್ಯಕ್ರಮದಲ್ಲಿ ಕಲಾರತ್ನ ಶಂ ನಾ ಅಡಿಗ ಕುಂಬ್ಳೆ ಇವರ ಶಿಷ್ಯೆ ಕುಮಾರಿ ಆಪ್ತ ಚಂದ್ರಮತಿ ಮುಳಿಯ ಇವರಿಂದ ’ಮಾತೃದೇವೋಭವ’ ಎಂಬ ಕಥಾ ಭಾಗದ ಹರಿಕಥಾ ಕಾಲ ಕ್ಷೇಪ ಆ.15ರಂದು ನಡೆಯಿತು.
ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದ ಅಧ್ಯಕ್ಷ ಡಾ. ಅಶೋಕ್ ಪ್ರಭು ಅವರು ಕಲಾವಿದೆಗೆ ಶಾಲು ಹೊದಿಸಿ ಸನ್ಮಾನಿಸಿದರು. ವಿದ್ಯಾಚಂದ್ರಕಾಂತ ಭಟ್ ಅವರು ಹರಿಕಥಾ ಕಲಾವಿದೆಯ ಪರಿಚಯಿಸಿದರು. ಆರಂಭದಲ್ಲಿ ಸುಲತಾ ವರದರಾಜ ನಾಯಕ್ ಅವರು ಹರಿಕಥಾಕಲಾವಿದೆಗೆ ಮಲ್ಲಿಗೆ ಹಾರ ತೊಡಿಸಿ ಚಾಲನೆ ನೀಡಿದರು. ತಬಲಾದಲ್ಲಿ ವಿಶ್ವನಾಥ ನಾಯಕ್ ಹಾಗೂ ಹಾರ್ಮೋನಿಯಂನಲ್ಲಿ ಪಾಂಡುರಂಗ ನಾಯಕರವರು ಸಹಕರಿಸಿದರು.

LEAVE A REPLY

Please enter your comment!
Please enter your name here