![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಕೆಎಸ್ಆರ್ಟಿಸಿ ಯಲ್ಲಿ ಪುತ್ತೂರು ವಿಭಾಗ ಸೇರಿದಂತೆ ಕರಾವಳಿ ಭಾಗದಲ್ಲಿ ಚಾಲಕ ಹುದ್ದೆ ಇರುವುದನ್ನು ಮನಗಂಡು ಈ ಹುದ್ದೆಗೆ ದ.ಕ ಜಿಲ್ಲೆಯವರನ್ನೇ ನೇಮಕವಾಗಬೇಕು ಎಂಬ ಉದ್ದೇಶದಿಂದ ಚಾಲಕ ಹುದ್ದೆಗೆ ಸುಮಾರು 70 ಮಂದಿ ಅರ್ಜಿ ಸಲ್ಲಿಸಿದ್ದರು. ಈ ಪೈಕಿ ತರಬೇತಿಗೆ ಹಾಜರಾಗಿ ಮೊದಲ ಪರೀಕ್ಷೆಯಲ್ಲಿ 55 ಮಂದಿ ತೇರ್ಗಡೆಹೊಂದಿದ್ದರು, ಈ ಪೈಕಿ 46 ಮಂದಿಗೆ ಮೊದಲ ಹಂತದಲ್ಲಿ ಚಾಲಕ ಹುದ್ದೆಗೆ ನೇಮಕವಾಗಿದ್ದು ಶಾಸಕರು ಪಟ್ಟ ಶ್ರಮ ಸಾರ್ಥಕವಾಗಿದೆ.
![](https://puttur.suddinews.com/wp-content/uploads/2023/08/IMG-20230817-WA0059.jpg)
ರೈ ಚಾರಿಟೇಬಲ್ ಟ್ರಸ್ಟ್ ಮೂಲಕ ಶಾಸಕರು ತನ್ನ ಸ್ವಂತ ಖರ್ಚಿನಿಂದ ಎಲ್ಲಾ ಚಾಲಕ ಆಕಾಂಕ್ಷಿಗಳನ್ನು ಹಾಸನಕ್ಕೆ ಕರೆದೊಯ್ದು ಅಲ್ಲಿ ತರಬೇತಿಯನ್ನು ಕೊಡಿಸಿದ್ದರು. ಮೊದಲ ಹಂತದ ತರಬೇತಿಯಲ್ಲಿ 27 ಮಂದಿ ಮತ್ತು ಎರಡನೇ ತಂಡದಲ್ಲಿ 28 ಮಂದಿಗೆ ತರಬೇತಿಯನ್ನು ನೀಡಲಾಗಿತ್ತು. ಈ ಪೈಕಿ ಕೆಲವು ಮಂದಿ ತರಬೇತಿಯಲ್ಲಿ ಅನುತ್ತೀರ್ಣರಾದ ಕಾರಣ ಅವರನ್ನು ಮುಂದಿನ ತರಬೇತಿ ಅವಧಿಗೆ ಕಾಯ್ದಿರಿಸಲಾಗಿತ್ತು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದವರು ಆ.10 ರಂದು ಪ್ರಾದೇಶಿಕ ತರಬೇತಿ ಕೇಂದ್ರ ಹಾಸನದಲ್ಲಿ ಚಾಲಕರ ಆಯ್ಕೆಯನ್ನು ಮಾಡಿರುತ್ತಾರೆ. ಇದರಲ್ಲಿ ಟ್ರಸ್ಟ್ ಮೂಲಕ ತರಬೇತಿ ಪಡಕೊಂಡ 46 ಮಂದಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಠೆಯ ಹೊರಗುತ್ತಿಗೆ ಆಧಾರದಲ್ಲಿ ಬಸ್ ಚಾಲಕರಾಗಿ ಆಯ್ಕೆಯಾಗಿರುತ್ತಾರೆ.
ಅಬ್ದುಲ್ ಅಜೀಜ್ ಒಳಮೊಗ್ರು,ಮಂಜುನಾಥ ಕೆ.ಆರ್ ಮುಂಡೂರು,ಯಶವಂತ ಮುಂಡೂರು,ವಿಶಾಲ್ ಡಿ ಸೋಜಾ ನರಿಮೊಗರು,ರಿತೇಶ್ ಆರ್ ಸಿಂಹವನ,ಹರಿಪ್ರಸಾದ್ ಎಮ್ ಕೆದಂಬಾಡಿ,ಮಹಮ್ಮದ್ ಇಬಾತುಲ್ಲಾ ಕೆಮ್ಮಿಂಜೆ,ಮಹಮ್ಮದ್ ರಫೀಕ್ ಎಮ್ ಅರಿಯಡ್ಕ,ಗಣೇಶ್ ಟಿ ಬಡಗನ್ನೂರು,ಪಿ ಸಂತೋಷ್ ಅಳಿಕೆ,ಕೌಶಿಕ್ ಐತೂರು, ಸ್ಟೀವನ್ ಚಾರ್ಲೆಸ್ ಸುಳ್ಯ,ಕಿಶೋರ್ ಕುಮಾರ್ ವಿಟ್ಲ,ರಾಜೆಂದ್ರ ಮೊಗ್ರು ಬೆಳ್ತಂಗಡಿ,ವಿವೇಕ್ ರಾಜ್ ಕನ್ಯಾನ,ಹರೀಶ್ ನಾಯ್ಕ್ ಮುಂಡಾನೆ,ಸೋಮಶೇಖರ ಕಡಬ,ಮೊಹಮ್ಮದ್ ಝಕಾರಿಯ ವಿಟ್ಲಮುಡ್ನೂರು, ನವೀನ್ ರೈ ಒಳಮೊಗ್ರು,ಸಚಿನ್ ಪಿ ಪಡುವನ್ನೂರು,ಕರುಣಾಕರ ಕೊಡಿಂಬಾಳ,ಮೋಹನ್ ಜಿ ಹಿರೇಬಂಡಾಡಿ,ದಿನೇಶ್ ಪಿ ಪಡುವನ್ನೂರು,ಶೈಲೇಶ್ ಕುಮಾರ್ ಪೆರ್ನೆ,ಮೊಹಮ್ಮದ್ ಸಾಧಿಕ್ ಬಿ ಕುಲ,ಪಿ ಸಂತೋಷ್ ಕುಮಾರ್ ಪರ್ಪುಂಜ,ಹರೀಶ್ ಎಸ್ ನೆಟ್ಟನಿಗೆ ಮುಂಡೂರು,ವಿಘ್ನೇಶ್ ಬಿ ನೂಜಿಬೈಲು,ಮೊಹಮ್ಮದ್ ರಫೀಕ್ ಕೊಲ್ತಿಗೆ,ದೇವಿಪ್ರಸಾದ್ ಸಿ ಸುಳ್ಯ,ಕಿರಣ್ ಕುಮಾರ್ ಎಸ್ ಬಲ್ನಾಡು,ಜನಾರ್ದನ ಪಾಟಾಲಿ ಪಾಣಾಜೆ,ಬಾಲಕೃಷ್ಣ ಆರ್ಯಾಪು,ಗಣೇಶ್ ಕೆಯ್ಯೂರು,ಸುನೀಲ್ ಎ ಪಾಣಾಜೆ,ಚಂದ್ರಶೇಖರ್ ಎಚ್ ಪೆರ್ನೆ,ಸೋಮಶೇಖರ ಇಡಾಲ ಪೆರಾಬೆ,ಹರ್ಷಿತ ಜಿ ಎನ್ಮೂರು ಸುಳ್ಯ,ಭರತ್ ಎಮ್ ಕುಟ್ರುಪ್ಪಾಡಿ,ಲೊಕೇಶ್ ಪೆರ್ವಾಜೆ ಸುಳ್ಯ, ಪುರಂದರ ಎನ್ ನೆಟ್ಟಣ,ಪ್ರಕಾಶ್ ರೈ ಕೊಯಿಲ,ಹರೀಂದ್ರ ಪಿ ಮುರುಳ್ಯ,ದಿವೀಶ್ ಕುಮಾರ್ ಕೆ ನರಿಮೊಗರು,ಆಯ್ಕೆಯಾದವರಾಗಿದ್ದಾರೆ.
ನಮ್ಮ ಜನರಿಗೆ ಕೆಎಸ್ಆರ್ಟಿಸಿಯಲ್ಲಿ ಹುದ್ದೆ ದೊರೆಯಬೇಕೆಂಬ ಉದ್ದೇಶದಿಂದ ನಾನು ಚಾಲಕ ಹುದ್ದೆಗೆ ಅರ್ಜಿ ಹಾಕುವಂತೆ ಪತ್ರಿಕೆಯಲ್ಲಿ ಜಾಹಿರಾತು ನೀಡಿ, ಹುದ್ದೆ ಆಕಾಂಕ್ಷಿಗಳನ್ನು ಆಯ್ಕೆ ಮಾಡಿ ಅವರನ್ನು ತನ್ನ ಸ್ವಂತ ಖರ್ಚಿನಲ್ಲೇ ಹಾಸನಕ್ಕೆ ಕರೆದೊಯ್ದು ಚಾಲನಾ ತರಬೇತಿಯನ್ನು ಕೊಡಿಸಿದ್ದು ಮೊದಲ ಆಯ್ಕೆ ಪ್ರಕ್ರಿಯೆಯಲ್ಲಿ 46 ಮಂದಿ ಚಾಲಕ ಹುದ್ದೆಗೆ ನೇಮಕವಾಗಿದ್ದಾರೆ. ಸರಕಾರಿ ಹುದ್ದೆಗೆ ಈ ಭಾಗದವರು ಅರ್ಜಿ ಹಾಕುವುದು ಬಹಳ ಕಡಿಮೆ. ನಮ್ಮವರಿಗೂ ಸರಕಾರಿ ಹುದ್ದೆ ಸಿಗಬೇಕು ಎಂಬ ಏಕೈಕ ಉದ್ದೇಶದಿಂದ ನಾನು ಶಾಸಕನೆಂಬ ನೆಲೆಯಲ್ಲಿ ಪ್ರಯತ್ನ ಪಟ್ಟಿದ್ದೆ, ಅದಕ್ಕೆ ಪೂರಕ ಎಂಬಂತೆ ಚಾಲಕರು ಸಹಕಾರ ನೀಡಿದ್ದು ಇದೀಗ 47 ಮಂದಿಗೆ ಉದ್ಯೋಗ ಲಭಿಸಿದ್ದು ನನಗೆ ಅತೀವ ಸಂತೋಷವನ್ನು ತಂದಿದೆ.
ಅಶೋಕ್ ರೈ
ಶಾಸಕರು ಪುತ್ತೂರು