ಮಹೇಶ್ ಶೆಟ್ಟಿ ತಿಮರೋಡಿಗೆ ಗನ್‌ಮ್ಯಾನ್ ಒದಗಿಸಲು ಆದೇಶವಾಗಿಲ್ಲ-ಪೊಲೀಸರ ಸ್ಪಷ್ಟನೆ

0

ಪುತ್ತೂರು:ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಎರಡು ಗನ್ ಮ್ಯಾನ್ ಒದಗಿಸುವಂತೆ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಅವರು ಸರಕಾರಕ್ಕೆ ಮನವಿ ಮಾಡಿದ್ದಾರೆ.

ಈ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಸರಕಾರ ಪೊಲೀಸರಿಗೆ ಸೂಚಿಸಿದೆ.ಆದರೆ ಅವರಿಗೆ ಗನ್ ಮ್ಯಾನ್ ಕೊಡಲು ಎಸ್.ಪಿ.ಯವರಿಗೆ ಸರಕಾರ ಆದೇಶ ಮಾಡಿಲ್ಲ ಎಂದು ಪೊಲೀಸ್ ಇಲಾಖೆ ಸ್ಪಷ್ಟನೆ ನೀಡಿದೆ.ಮಹೇಶ್ ಶೆಟ್ಟಿ ತಿಮರೋಡಿಯವರಿಗೆ ಗನ್‌ಮ್ಯಾನ್ ಒದಗಿಸಲು ಸರಕಾರ ದ.ಕ.ಎಸ್ಪಿಯವರಿಗೆ ಆದೇಶ ಮಾಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಪ್ರಸಾರವಾಗಿತ್ತು.

LEAVE A REPLY

Please enter your comment!
Please enter your name here