ಕಬಡ್ಡಿ- ಆಲಂಕಾರು ಶ್ರೀ ಭಾರತಿ ವಿದ್ಯಾಸಂಸ್ಥೆಯ ಬಾಲಕಿಯರ ತಂಡ ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆ

0

ಆಲಂಕಾರು: ಆಲಂಕಾರು ಶ್ರೀ ಭಾರತಿ ವಿದ್ಯಾ ಸಂಸ್ಥೆಗಳ ಬಾಲಕಿಯರ ತಂಡ ವಿದ್ಯಾಭಾರತಿ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ 14ನೇ ವಯೋಮಾನದ ವಿಭಾಗದ ಕಬಡ್ಡಿ ಪಂದ್ಯಾಟದಲ್ಲಿ ವಿದ್ಯಾಭಾರತಿ ದ.ಕ ಜಿಲ್ಲೆ ಇದರ ಆಶ್ರಯದಲ್ಲಿ ಶಕ್ತಿ ವಿದ್ಯಾಸಂಸ್ಥೆಗಳು ಶಕ್ತಿನಗರ ಮಂಗಳೂರು ನಲ್ಲಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ
ಪ್ರಥಮ ಸ್ಥಾನ ಪಡೆದು ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಆಲಂಕಾರು ಶ್ರೀ ಭಾರತಿ ವಿದ್ಯಾ ಸಂಸ್ಥೆಯ ಬಾಲಕಿಯರಾದ ಬಿ. ಯಶಸ್ವಿನಿ, ಕೆ ಭವ್ಯ, ಚಿನ್ಮಯಿ, ಇಂಚರ ಎಲ್ ಶೆಟ್ಟಿ, ಅಲ್ವಿತ, ವಾತ್ಸಲ್ಯ ಬಿ ಗೌಡ, ಸಿಂಚನ ಎಸ್, ದೀಕ್ಷಾ ಶ್ರೀ, ಹಂಸಿಕ, ಲಕ್ಷ್ಯ ಕೆ, ತೃಶಾ ಎಮ್. ಸಿ, ತನ್ವಿ ತಂಡ ಅಂತಿಮ ಸುತ್ತಿನಲ್ಲಿ ಮಂಡ್ಯ ಜಿಲ್ಲೆಯನ್ನು ಸೊಲಿಸಿ ವಿದ್ಯಾ ಭಾರತಿಯ, ಮಧ್ಯಕ್ಷೇತ್ರಿಯ ದಕ್ಷಿಣ ಭಾರತ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಈ ಪಂದ್ಯಾಟಗಳು ಹೈದರಾಬಾದ್ ನಲ್ಲಿ ಸೆಪ್ಟೆಂಬರ್ 2 ಹಾಗೂ 3 ನೇ ತಾರೀಕಿನಂದು ನಡೆಯಲಿದೆ.

LEAVE A REPLY

Please enter your comment!
Please enter your name here