ಹಿರೆಬಂಡಾಡಿ ಸರಕಾರಿ ಪ್ರೌಢಶಾಲೆ ಎಸ್.ಡಿ.ಎಂ.ಸಿ. ಕಾರ್ಯಾಧ್ಯಕ್ಷರಾಗಿ ಸತೀಶ್ ಶೆಟ್ಟಿ ಹೆನ್ನಾಳ ನೇಮಕ

0

ಹಿರೆಬಂಡಾಡಿ: ಸರಕಾರಿ ಪ್ರೌಢಶಾಲೆ ಹಿರೆಬಂಡಾಡಿಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಯ ನೂತನ ಕಾರ್ಯಾಧ್ಯಕ್ಷರಾಗಿ, ಹಿರೆಬಂಡಾಡಿ ಗ್ರಾಮ ಪಂಚಾಯತ್ ಸದಸ್ಯ ಸತೀಶ್ ಶೆಟ್ಟಿ ಹೆನ್ನಾಳರವರನ್ನು ಪುತ್ತೂರು ಶಾಸಕ, ಎಸ್.ಡಿ.ಎಂ.ಸಿ. ಅಧ್ಯಕ್ಷರೂ ಆದ ಅಶೋಕ ಕುಮಾರ್ ರೈ ಕೆ.ಎಸ್.ರವರು ನೇಮಕ ಮಾಡಿದ್ದಾರೆ.


ಪೋಷಕ ಸದಸ್ಯರಾಗಿ ಇಂದಿರಾ, ಶಾಂಭವಿ, ಜಾನಕಿ, ಭವಾನಿ, ಹೇಮಾವತಿ, ಹಮೀದ್, ಲಕ್ಷ್ಮೀಶ, ಸತೀಶ್ ಶೆಟ್ಟಿ ಹಾಗೂ ದಯಾನಂದ ಎಸ್‌ರವರನ್ನು ಪೋಷಕರ ಸಭೆಯಲ್ಲಿ ಆಯ್ಕೆ ಮಾಡಲಾಗಿತ್ತು. ಅಂಗನವಾಡಿ ಕಾರ್ಯಕರ್ತೆ ರೇವತಿ, ಪ್ರಾಥಮಿಕ ಆರೋಗ್ಯ ಕಾರ್ಯಕರ್ತೆ ಶಾರದಾ, ಮುಖ್ಯಶಿಕ್ಷಕರಾದ ಹರಿಕಿರಣ್ ಕೆ ಇವರು ಪದನಿಮಿತ್ತ ಸದಸ್ಯರಾಗಿರುತ್ತಾರೆ. ನಾಮನಿರ್ದೇಶಿತ ಸದಸ್ಯರಾಗಿ ಹಸೈನಾರ್ ಹಾಜಿ, ಶ್ರೀಧರ ಮಠಂದೂರು, ನಿವೃತ್ತ ಶಿಕ್ಷಕರಾದ ಬಾಲಚಂದ್ರ ಗುಂಡ್ಯ, ಗೀತಾ ದಾಸರಮೂಲೆ, ವಿದ್ಯಾ ನಿಡ್ಡೆಂಕಿ, ರವೀಂದ್ರ ಪಟಾರ್ತಿ ಹಾಗೂ ಹಿರಿಯ ತರಗತಿ ವಿದ್ಯಾರ್ಥಿ ದೀಕ್ಷಿತ್ ಇವರನ್ನು ಶಾಸಕರು ನೇಮಕ ಮಾಡಿರುತ್ತಾರೆ.

LEAVE A REPLY

Please enter your comment!
Please enter your name here