ಸುದಾನ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಹೆತ್ತವರ ಸಭೆ

0

ಪುತ್ತೂರು: ಸುದಾನ ವಸತಿ ಶಾಲೆಯಲ್ಲಿ 2023-24ನೇ ಸಾಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳ ಹೆತ್ತವರ ಸಭೆಯನ್ನು ಆ.19ರಂದು ಶಾಲೆಯ ಎಡ್ವರ್ಡ್ ಹಾಲ್‌ನಲ್ಲಿ ಆಯೋಜಿಸಲಾಗಿತ್ತು.


ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ನಿರಂಜನ್ ರೈ ಮಠಂತಬೆಟ್ಟು ಮಾತನಾಡಿ, ಉಳಿಪೆಟ್ಟು ತಿಂದ ಕಲ್ಲೇ ಹೇಗೆ ಶಿಲ್ಪವಾಗಿ ಅರಳಿ ಪೂಜಾರ್ಹವಾಗುವಂತೆ ಹಾಗೆಯೇ ಬದುಕಿನ ಕಷ್ಟ-ನಷ್ಟಗಳು ವ್ಯಕ್ತಿಯನ್ನು ಸಾಧಕನನ್ನಾಗಿ ಮಾಡುತ್ತವೆ, ಗೌರವಾರ್ಹನನ್ನಾಗಿಸುತ್ತವೆ ಎಂದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕ ರೆ|ವಿಜಯ ಹಾರ್ವಿನ್‌ ಮಾತನಾಡಿ, ಪ್ರತಿ ನಿತ್ಯವು ಕಲಿಕಾ ಸಿದ್ಧತೆಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡರೆ ಸಾಧನೆಯು ಕಷ್ಟವಲ್ಲ ಎಂದರು.


ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್‌ ಮಾತನಾಡಿ, ವಿದ್ಯಾರ್ಥಿಗಳು ಬಾಹ್ಯ ಆಕರ್ಷಣೆಯಿಂದ ಮುಕ್ತರಾಗಿ, ಹೆತ್ತವರು ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಶಿಸ್ತು, ಕ್ರಮಬದ್ಧ ಕಲಿಕೆಯೊಂದಿಗೆ ಗುರಿಯೆಡೆಗೆ ಸಾಗಬೇಕು ಎಂದರು. ಸಭೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಸಹ ಶಿಕ್ಷಕಿ ಶ್ಯಾಮಲಾ ಬಂಗೇರ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here