![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: ಸೋಲಾರ್ ಎನರ್ಜಿ ವಿವಿಧ ಆವಿಷ್ಕಾರ ಮತ್ತು ಕೆಂಗೆನ್ ವಾಟರ್ ನ ಆರೋಗ್ಯಕರ ಲಾಭಗಳ ಬಗ್ಗೆ ಮಾಹಿತಿ ಕಾರ್ಯಗಾರ ಸೆ.2 ಶನಿವಾರ ಅಪರಾಹ್ನ 2 ರಿಂದ 4:30 ತನಕ ಪುತ್ತೂರು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಬಿಲ್ಡಿಂಗ್,ಪ್ರಥಮ ಮಹಡಿಯಲ್ಲಿರುವ ಸುದ್ದಿ ಕೃಷಿ ಸೇವಾ ಕೇಂದ್ರದಲ್ಲಿ ನಡೆಯಲಿದೆ.
ಸೋಲಾರ್ ಎನರ್ಜಿಯ ವಿವಿಧ ಉಪಯುಕ್ತ ಸಿಸ್ಟಮ್ ಗಳ ಬಗ್ಗೆ ತಜ್ಞ ಎಂದು ಪರಿಗಣಿಸಲ್ಪಟ್ಟ ಉಮೇಶ್ ರೈ ಕೈಕಾರ ಅವರು ಸೋಲಾರ್ ಆನ್ ಗ್ರಿಡ್ ವ್ಯವಸ್ಥೆಗಳಿಂದ ವಿದ್ಯುತ್ ಇಲಾಖೆಗೆ ಕರೆಂಟ್ ಕೊಡುವ ಬಗ್ಗೆ, ಲಾಭ ನಷ್ಟದ ಕುರಿತು, ಹೈಬ್ರಿಡ್ ಇನ್ವರ್ಟರ್ ಗಳ, ಇನ್ವರ್ಟರ್ ಗಳ ಬಗ್ಗೆ ಪ್ರಾತ್ಯಕ್ಷಿತೆಯೊಂದಿಗೆ ಮಾಹಿತಿ ನೀಡಲಿದ್ದಾರೆ. ಮತ್ತು ಮಾಧವ ಭಂಡಾರಿ ಅವರು ಕೆಂಗೆನ್ ವಾಟರ್ ನ ಆರೋಗ್ಯಕರ ಲಾಭಗಳ ಬಗ್ಗೆ ಮಾಹಿತಿ ನೀಡಲಿದ್ದಾರೆ. ಆಸಕ್ತರು ಹೆಸರನ್ನು ನೊಂದಾವಣೆ ಮಾಡಲು ಸಂಪರ್ಕಿಸಿ: 8050293990, 6364570738