![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಬೆಟ್ಟಂಪಾಡಿ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ಶ್ರೀ ಗಣಪತಿ ಹೋಮ, ಶತರುದ್ರಾಭಿಷೇಕ ಹಾಗೂ ಸೀಯಾಳಾಭಿಷೇಕ ಸೆ.2 ಮೂರನೇ ಶ್ರಾವಣ ಶನಿವಾರದಂದು ನಡೆಯಲಿದೆ. ಭಕ್ತಾದಿಗಳು ಕಾರ್ಯಕ್ರಮದ ಸಲುವಾಗಿ ಹೂ, ಹಿಂಗಾರ, ಬಿಲ್ವಪತ್ರೆ, ಸೀಯಾಳ, ತೆಂಗಿನಕಾಯಿ ಇತ್ಯಾದಿಗಳನ್ನು ಸೆ.2ರ ಬೆಳಿಗ್ಗೆ 8.30ರ ಮೊದಲು ತಲುಪಿಸಬಹುದಾಗಿದೆ. ಗಣಪತಿ ಹೋಮ, ಶತರುದ್ರಾಭಿಷೇಕ ಮತ್ತು ಸರ್ವಸೇವೆ ಮಾಡಿಸಿಕೊಳ್ಳಬಹುದಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
![](https://puttur.suddinews.com/wp-content/uploads/2023/09/download.jpg)