ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ವತಿಯಿಂದ ಸಹಾಯಧನ ಚೆಕ್ ವಿತರಣೆ

0

ನೆಲ್ಯಾಡಿ: ಕೊಣಾಲು ಗ್ರಾಮದ ಶ್ರೀ ವರಲಕ್ಷ್ಮಿ ಸಂಘದ ಸದಸ್ಯೆ ಲೀಲಾವತಿಯವರು ಇತ್ತೀಚೆಗೆ ಅಕಾಲಿಕ ಮರಣವಾಗಿದ್ದರು. ಅವರ ಪತಿ ಪ್ರಭಾನಂದರವರಿಗೆ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನಿಂದ ನೀಡುವ ಸಹಾಯಧನದ ಚೆಕ್ ನ್ನು ವಲಯ ಟ್ರಸ್ಟ್ ನಿರ್ದೇಶಕರಾಗಿರುವ ರವಿಚಂದ್ರ ಗೌಡ ಹೊಸವಕ್ಲುರವರು ನೀಡಿದರು. ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ಲಕ್ಷ್ಮಣ ಗೌಡ ಗೌರ್ಲೆ ಗ್ರಾಮ ಸಮಿತಿ ಅಧ್ಯಕ್ಷರಾದ ನೋಣಯ್ಯ ಗೌಡ ಡೆಬ್ಬೇಲಿ, ವಲಯದ ಪ್ರೇರಕರು ಪರಮೇಶ್ವರ ಗೌಡ, ಸಂಘದ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here