![](https://puttur.suddinews.com/wp-content/uploads/2024/06/Imperial_Manjunatheshwara_-GL-Acharya.gif)
ಪುತ್ತೂರು: 2 ವರ್ಷದ ಹಿಂದಿನ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ವಾರಂಟ್ ಆರೋಪಿಯಾಗಿರುವ ಯಕ್ಷಗಾನ ಕಲಾವಿದರೊಬ್ಬರನ್ನು ಸಂಪ್ಯ ಪೊಲೀಸರು ಬಂಧಿಸಿದ್ದಾರೆ.
ಬದಿಯಡ್ಕದ ಶಬರೀಶ್ ಮಾನ್ಯ ಎಂಬವರು ಬಂಧಿತ ಆರೋಪಿ.ಅವರು ಹನುಮಗಿರಿ ಯಕ್ಷಗಾನ ಮೇಳದ ಕಲಾವಿದರಾಗಿದ್ದ ಸಂದರ್ಭ 2021ರ ನೆವಂಬರ್ನಲ್ಲಿ ಸುಮಾರು ರೂ.3.5 ಲಕ್ಷ ಹಣ ಪಡೆದು ಚೆಕ್ ನೀಡಿದ್ದರು.ಅವರು ಪಡೆದ ಹಣವನ್ನು ಹಿಂದಿರುಗಿಸದೆ, ಮೇಳಕ್ಕೂ ಬಾರದೆ ತಲೆಮರೆಸಿಕೊಂಡಿದ್ದರೆಂದು ಹನುಮಗಿರಿ ಮೇಳದವರ ಕಡೆಯಿಂದ ಶಬರೀಶ್ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತು.ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಇದ್ದುದರಿಂದ ಶಬರೀಶ್ ಅವರ ಬಂಧನಕ್ಕೆ ನ್ಯಾಯಾಲಯ ವಾರಂಟ್ ಜಾರಿ ಮಾಡಿತ್ತು.ಸಂಪ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.