ನೆಲ್ಯಾಡಿ ಬೆಥನಿ ಐಟಿಐಯಲ್ಲಿ ಅಭಿಯಂತರರ ದಿನಾಚರಣೆ

0

ನೆಲ್ಯಾಡಿ: ಇಲ್ಲಿನ ಬೆಥನಿ ಐಟಿಐಯಲ್ಲಿ ಅಭಿಯಂತರರ ದಿನಾಚರಣೆ ಆಚರಿಸಲಾಯಿತು.ಸಂಪನ್ಮೂಲ ವ್ಯಕ್ತಿಯಾಗಿದ್ದ ಐಟಿಐ ಪ್ರಾಧ್ಯಾಪಕ ಸುಬ್ರಾಯ ನಾಯಕ್ ಪುಣಚ ಅವರು ಮಾತನಾಡಿ, ಸತತ ಪರಿಶ್ರಮ, ದುಡಿಮೆ, ಸಮರ್ಪಣೆ ಹಾಗೂ ಧ್ಯೇಯದ ಕಡೆಗೆ ಬದ್ಧತೆ, ಸೇವೆ ಸಮಾಜದ ಪ್ರತಿಯೊಬ್ಬರ ಕರ್ತವ್ಯ ಆಗಬೇಕು ಎಂಬುದು ಸರ್ ಎಮ್ ವಿಶ್ವೇಶ್ವರಯ್ಯನವರು ಅವರ ಜೀವನದಲ್ಲಿ ಅಳವಡಿಸಿ ನಡೆದು ತೋರಿಸಿದರು, ಆ ಮೂಲಕ ಹೊಸ ಸಮಾಜದಿಂದ ರಾಷ್ಟ್ರ ನಿರ್ಮಾಣ ಆಗಬೇಕಿದೆ ಎಂದು ಹೇಳಿದರು.

ಸಂಸ್ಥೆಯ ನಿರ್ದೇಶಕರಾದ ರೆ.ಫಫಾ.ಜೈಸನ್ ಸಿಮೊನ್ ಒಐಸಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಪ್ರಾಚಾರ್ಯರಾದ ಸಜಿ ಕೆ ತೋಮಸ್, ಜಾನ್ ಪಿ.ಎಸ್., ವರ್ಗೀಸ್ ಎನ್.ಟಿ. ಉಪಸ್ಥಿತರಿದ್ದರು. ಶಿವಾನಂದ ಸ್ವಾಗತಿಸಿ, ಅನಂತಕೃಷ್ಣ ವಂದಿಸಿದರು. ಹರಿಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here