ಪುತ್ತೂರು ಪೇಟೆಯಲ್ಲಿ ಗಾಲಿ ಕುರ್ಚಿಯಲ್ಲಿ ಬಿಕ್ಷೆ ಬೇಡುತ್ತಿದ್ದ ವಿಕಲಚೇತನ ಮೃತ್ಯು

0

ಪುತ್ತೂರು: ಪುತ್ತೂರು‌ ಪೇಟೆಯಲ್ಲಿ ಗಾಲಿ ಕುರ್ಚಿಯಲ್ಲಿ ಬಿಕ್ಷೆ ಬೇಡುತ್ತಿದ್ದ ವಿಕಲಚೇತನ ಅ.5 ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದ ಬಳಿ ಮೃತಪಟ್ಟಿದ್ದಾರೆ.

ಎಡಕಾಲು ಕಳೆದುಕೊಂಡಿರುವ ಗದಗ ಮೂಲದವರೆನ್ನಲಾದ ಈ ಬಿಕ್ಷುಕ ಕಳೆದ ಕೆಲವು ದಿನಗಳಿಂದ ಪುತ್ತೂರು ನಗರ ಸೇರಿದಂತೆ ದೇವಸ್ಥಾನದ ಬಳಿ ಗಾಲಿ ಕುರ್ಚಿಯಲ್ಲಿ ಬಿಕ್ಷೆ ಬೇಡುತ್ತಿದ್ದರು. ದಾನಿಗಳು ನೀಡಿದ ಅಲ್ಪಸ್ವಲ್ಪ ಬಿಕ್ಷೆಯಿಂದ ಜೀವನ ಸಾಗಿಸುತ್ತಿದ್ದ ಈ ವ್ಯಕ್ತಿ ಇಂದು ಮಧ್ಯಾಹ್ನ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತ ದೇಹವನ್ನು ಸರಕಾರಿ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿದ್ದಾರೆ.

LEAVE A REPLY

Please enter your comment!
Please enter your name here