ಆಳ್ವಾಸ್‌ ಉದ್ಯೋಗ ಮೇಳಕ್ಕೆ ತೆರಳಿದ ವಿದ್ಯಾರ್ಥಿನಿ ಅಸ್ವಸ್ಥ – ಶಾಸಕರ ಕಾರಿನಲ್ಲಿ ಪುತ್ತೂರಿಗೆ

0

ಪುತ್ತೂರು: ಮೂಡಬಿದ್ರೆಯ ಆಳ್ವಾಸ್‌ ನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಪುತ್ತೂರಿನ ಯುವತಿಯೋರ್ವಳು ಅಸ್ವಸ್ಥಳಾಗಿದ್ದು, ಆಕೆಯನ್ನು ಪುತ್ತೂರು ಶಾಸಕ ಅಶೋಕ್‌ ಕುಮಾರ್‌ ರೈ ಅವರ ಕಾರಿನಲ್ಲಿ ಪುತ್ತೂರಿಗೆ ಕರೆ ತರಲಾಯಿತು. ಕಾವು ನಿವಾಸಿಯಾಗಿರುವ ವಿದ್ಯಾರ್ಥಿನಿ ಇಂದು ಬೆಳಿಗ್ಗೆ ತನ್ನ ತಂದೆಯ ಜೊತೆ ಮನೆಯಿಂದ ಬೈಕ್‌ ನಲ್ಲಿ ಬಂದಿದ್ದು ಇಳಿಯುವ ವೇಳೆ ಆಯತಪ್ಪಿ ಕೆಳಗೆ ಬಿದ್ದಿದ್ದಳು. ಬಳಿಕ ಆಕೆ ಮೂಡಬಿದ್ರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ಉದ್ಯೋಗ ಮೇಳಕ್ಕೆ ತೆರಳಿದ್ದು, ಅಲ್ಲಿ ಆಕೆ ಅಸ್ವಸ್ಥಗೊಂಡಿದ್ದಳು. ತಕ್ಷಣ ಕಾರ್ಯಪ್ರವರ್ತರಾದ ಟ್ರಸ್ಟ್‌ ಕಾರ್ಯಾಧ್ಯಕ್ಷ ಸುದೇಶ್‌ ಶೆಟ್ಟಿ ಹಾಗೂ ನಿಹಾಲ್‌ ಶೆಟ್ಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅಸ್ವಸ್ಥಳಾದ ಹಿನ್ನಲೆಯಲ್ಲಿ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಆಕೆಗೆ ಅಸಾಧ್ಯವಾದ ಕಾರಣ ಮತ್ತೆ ಆಕೆಯನ್ನು ಪುತ್ತೂರಿಗೆ ಕ್ಷೇಮವಾಗಿ ಕರೆತರಲಾಗಿದೆ.

LEAVE A REPLY

Please enter your comment!
Please enter your name here