ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ಪುತ್ತೂರು ಕ್ಷೇತ್ರ ಸಮಿತಿ ಸಭೆ

0

ಸದಸ್ಯರ ಆರೋಗ್ಯ ನಿಧಿಯ ಬಗ್ಗೆ ಜಿಲ್ಲಾ ಸಮಿತಿಯಲ್ಲಿ ಚರ್ಚಿಸಿ ತಿರ್ಮಾನ – ರಘುನಾಥ. ಬಿ

ಪುತ್ತೂರು: ಕರ್ನಾಟಕ ಸ್ಟೇಟ್ ಟೈಲರ್ ಎಸೋಸಿಯೇಶನ್ ಪುತ್ತೂರು ಕ್ಷೇತ್ರ ಸಮಿತಿ ಸಭೆ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆಯಿತು. ಕ್ಷೇತ್ರ ಸಮಿತಿ ಅಧ್ಯಕ್ಷೆ ಉಮಾ.ಯು.ಅಧ್ಯಕ್ಷತೆ ವಹಿಸಿ ಮಾತನಾಡಿ ಟೈಲರ್‌ಗಳಿಗೆ ಆರೋಗ್ಯ ನಿಧಿಯ ಬಗ್ಗೆ ಮಾತನಾಡಿ ಮುಂದಿನ ದಿನಗಳಲ್ಲಿ ಕ್ಷೇತ್ರದ ಟೈಲರ್ ಸದಸ್ಯರಿಗೆ ಪ್ರಯೋಜನವಾಗಲಿದೆ ಎಂದರು. ರಾಜ್ಯ ಸಮಿತಿ ಲೆಕ್ಕ ಪರಿಶೋಧಕ ರಘುನಾಥ ಬಿ. ಪುತ್ತೂರು ಮಾತನಾಡಿ ಕ್ಷೇತ್ರ ಟೈಲರ್ ಸದಸ್ಯರ ಸಮಸ್ಯೆಯನ್ನು ಮಂಗಳೂರಿನ ಜಿಲ್ಲಾ ಸಮಿತಿಯಲ್ಲಿ ಚರ್ಚಿಸಿ ಹೇಗೆ ಮಾಡುವುದೆಂದು ಸಭೆಯಲ್ಲಿ ತಿರ್ಮಾನ ತೆಗೆದು ಮತ್ತೆ ನಿರ್ಧಾರ ಮಾಡಲಾಗುವುದು. ಟೈಲರ್ ವೃತ್ತಿ ಭಾಂದವರ ವಾರ್ಷಿಕ ಮೆಂಬರ್‌ಶಿಪ್ ನವೀಕರಣ ಮಾಡಿದವರಿಗೆ ಮಾತ್ರ ಈ ಪ್ರಯೋಜನ ಸಿಗಬಹುದು ಎಂದರು.

ಜಿಲ್ಲಾ ಸಮಿತಿಯ ಜೊತೆ ಕಾರ್ಯ ದರ್ಶಿ


ನಿಕಟಪೂರ್ವ ಜಿಲ್ಲಾಧ್ಯಕ್ಷ ಜಯಂತ್ ಉರ್ಲಾಂಡಿ, ರಾಜ್ಯ ಸಮಿತಿ ಲೆಕ್ಕಪರಿಶೋಧಕ ರಘುನಾಥ ಬಿ.ಪುತ್ತೂರು, ಕ್ಷೇತ್ರ ಸಮಿತಿ ಪುತ್ತೂರು ಇದರ ನಿಕಟಪೂರ್ವಧ್ಯಕ್ಷ ಜಯರಾಮ ಬಿ ಎನ್, ಕ್ಷೇತ್ರ ಸಮಿತಿ ಪ್ರಧಾನ ಕಾರ‍್ಯದರ್ಶಿ ಚಿತ್ರಾ ಕುಂಬ್ರ, ಜಿಲ್ಲಾ ಜತೆ ಕಾರ್ಯದರ್ಶಿ ಸುರೇಖ ನಿಡ್ಪಳ್ಳಿ, ಕ್ಷೇತ್ರ ಸಮಿತಿ ಕೋಶಾಧಿಕಾರಿ ಪರಮೇಶ್ವರ ಕಾಣಿಯೂರು, ಜಿಲ್ಲಾ ಸಮಿತಿ ಸದಸ್ಯ ಶಂಭು ಬಲ್ಯಾಯ ಮುಂಡೋಡಿ, ಪುತ್ತೂರು ತಾಲೂಕು 9 ವಲಯದ ಅಧ್ಯಕ್ಷರು ಹಾಗೂ ಕಾರ‍್ಯದರ್ಶಿಗಳು ತಮ್ಮ ಸಲಹೆ ಸೂಚನೆ ತಿಳಿಸಿದರು. ನಗರ ವಲಯಾಧ್ಯಕ್ಷ ದಿನೇಶ್ ಸಂಪ್ಯ, ಕಾರ‍್ಯದರ್ಶಿ ಆಶಾ ಕಲ್ಲಾರೆ, ನರಿಮೊಗರು ವಲಯದ ಕೋಶಾಧಿಕಾರಿ ಜತ್ತಪ್ಪ ಗೌಡ, ಪುಣಚ ವಲಯ ಅಧ್ಯಕ್ಷೆ ನಿರ್ಮಲ, ಕಾರ‍್ಯದರ್ಶಿ ಉದಯ.ಎನ್, ಕುಂಬ್ರ ವಲಯ ಕಾರ‍್ಯದರ್ಶಿ ಪೂರ್ಣಿಮಾ ಭಟ್, ಈಶ್ವರಮಂಗಲ ವಲಯ ಅಧ್ಯಕ್ಷೆ ರೇವತಿ, ಕಾರ‍್ಯದರ್ಶಿ ಗಣೇಶ್, ಉಪ್ಪಿನಂಗಡಿ ವಲಯ ಅಧ್ಯಕ್ಷ ಕೃಷ್ಣ ನಾಯ್ಕ, ಕಾರ್ಯದರ್ಶಿ ಕವಿತಾ ರೈ, ಪಾಣಜೆ ವಲಯ ಅಧ್ಯಕ್ಷೆ ಶಶಿಕಲಾ, ಕಾರ‍್ಯದರ್ಶಿ ವಿದ್ಯಾ, ಸವಣೂರು ವಲಯ ಅಧ್ಯಕ್ಷೆ ಯಶೋಧ ಮೆದು, ಕಾರ‍್ಯದರ್ಶಿ ಶುಭಲಕ್ಷ್ಮಿ, ಕಾಣಿಯೂರು ವಲಯ ಅಧ್ಯಕ್ಷೆ ಜಯಶ್ರೀ, ಕಾರ‍್ಯದರ್ಶಿ ಭವ್ಯ ದೋಲ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

ಇತ್ತೀಚೆಗೆ ನಿಧನ ಹೊಂದಿದ ಪುತ್ತೂರು ನಗರ ವಲಯ ಸದಸ್ಯ ಅಚ್ಯುತ ಟೈಲರ್ ಸಂಟ್ಯಾರು ಪಾಪೆತ್ತಡ್ಕರವರಿಗೆ ಮೌನ ಪ್ರಾರ್ಥನೆ ನಡೆಯಿತು. ಟೈಲರ್ ಎಸೋಸಿಯೇಶನ್ ಜಿಲ್ಲಾ ಜತೆ ಕಾರ್ಯದರ್ಶಿ ಸುರೇಖ ನಿಡ್ಪಳ್ಳಿ ಪ್ರಾರ್ಥಿಸಿದರು.

LEAVE A REPLY

Please enter your comment!
Please enter your name here