ವಿಹಿಂಪ, ಬಜರಂಗದಳ ಆಲಂಕಾರು ಘಟಕಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

0

ಪುತ್ತೂರು: ವಿಶ್ವ ಹಿಂದೂ ಪರಿಷದ್ ಬಜರಂಗದಳ ಉಪ್ಪಿನಂಗಡಿ ಪ್ರಖಂಡ ಇದರ ಅಲಂಕಾರು ನೂತನ ಘಟಕ ಇತ್ತೀಚೆಗೆ ಉದ್ಘಾಟನೆಗೊಂಡಿದ್ದು, ವಿಹಿಂಪ ಅಧ್ಯಕ್ಷರಾಗಿ ವಸಂತ್ ಕುದುರೊಟ್ಟು, ಬಜರಂಗದಳ ಸಂಯೋಜಕರಾಗಿ ಮನೋಹರ್ ಆಲಂಕಾರು ಅವರನ್ನು ಆಯ್ಕೆ ಮಾಡಲಾಗಿದೆ.
ವಿಶ್ವಹಿಂದು ಪರಿಷತ್ ಉಪಾಧ್ಯಕ್ಷರಾಗಿ ಮಹೇಶ್ ಪೆರಾಬೆ, ಕಾರ್ಯದರ್ಶಿಯಾಗಿ ಅಭಿಷೇಕ್ ಶೆಟ್ಟಿ ಪೂಂಜ, ಜೊತೆ ಕಾರ್ಯದರ್ಶಿಯಾಗಿ ಪ್ರಜ್ವಲ್ ಬಿರ್ವ ಅಗತ್ತಾಡಿ ಧೋಳ ಬಾರಿಕೆ, ಗೋ ರಕ್ಷಕ ಪ್ರಮುಖರಾಗಿ ಹೇಮಂತ್ ಪರಾರಿ, ಬಜರಂಗದಳ ಸಹ ಸಯೋಜಕರಾಗಿ ಸಂತೋಷ್ ಶೆಟ್ಟಿ ನೆಕ್ಕರೆ, ಪ್ರೀತಮ್ ಸಿ.ರೈ ಕುಂತೂರು, ಗಣೇಶ್ ಮರುವಂತಿಲ, ಬಲೋಪಸಾನ ಕೇಂದ್ರ ಪ್ರಮುಖರಾಗಿ ಸಂತೋಷ್ ನಡುಗುಡ್ಡೆ, ಸತ್ಸಂಗ ಪ್ರಮುಖರಾಗಿ ಪ್ರವೀಣ್ ಕೊಂಡಾಡಿ, ಸೇವಾ ಪ್ರಮುಖರಾಗಿ ಗಣೇಶ್ ಮಾರಂಗ, ಸುರಕ್ಷಾ ಪ್ರಮುಖರಾಗಿ ಮನು ಬಾರಡ್ಕ ಇವರನ್ನು ಆಯ್ಕೆ ಮಾಡಲಾಯಿತು.
ಆಯ್ಕೆ ಪ್ರಕ್ರಿಯೆ ಸಂದರ್ಭ ವಿಶ್ವ ಹಿಂದೂ ಜಿಲ್ಲಾ ಕಾರ್ಯದರ್ಶಿ ನವಿನ್ ನೆರಿಯ, ಉಪ್ಪಿನಂಗಡಿ ಪ್ರಖಂಡ ಬಜರಂಗದಳ ಸಂಯೋಜಕ್ ಸಂತೋಷ್, ಪುತ್ತೂರು ಗ್ರಾಮಾಂತರ ಪ್ರಖಂಡ ಬಜರಂಗದಳ ಸಹ ಸಂಯೋಜಕ್ ಕಿರಣ್ ರಾಮಕುಂಜ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here