‘ಪುತ್ತೂರ‍್ದ ಪಿಲಿರಂಗ್’ ಪಿಲಿ ನಲಿಕೆ ಸ್ಪರ್ಧೆಯ ಆಮಂತ್ರಣ ಪತ್ರ ವಿತರಣೆ

0

ಪುತ್ತೂರು:ಅ.22ರಂದು ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿರುವ ‘ಪುತ್ತೂರ‍್ದ ಪಿಲಿರಂಗ್ ಸೀಸನ್-2’ ಪಿಲಿನಲಿಕೆ ಸ್ಪರ್ಧೆ ಕಾರ್ಯಕ್ರಮದ ಆಮಂತ್ರಣ ಪತ್ರ ವಿತರಣಾ ಕಾರ್ಯಕ್ರಮ ಪುತ್ತೂರು ದರ್ಬೆಯಿಂದ ಬೊಳುವಾರು ತನಕ ನಡೆಯಿತು.


ಚೆಂಡೆ ಸದ್ದು, ಹುಲಿ ವೇಷಧಾರಿಗಳ ಕುಣಿತ,ಕಲ್ಲಡ್ಕದ ಗೊಂಬೆಗಳ ಪ್ರದರ್ಶನದೊಂದಿಗೆ ದರ್ಬೆ ವೃತ್ತದಿಂದ ಹೊರಟ ಆಮಂತ್ರಣ ಪತ್ರ ವಿತರಣಾ ಮೆರವಣಿಗೆ ಕಾರ್ಯಕ್ರಮ ಬೊಳುವಾರಿನಲ್ಲಿ ಸಮಾಪ್ತಿಗೊಂಡಿತು.ಪುತ್ತೂರ‍್ದ ಪಿಲಿರಂಗ್ ಸಿಸನ್-2 ಸಮಿತಿಯ ಗೌರವಾಧ್ಯಕ್ಷರಾಗಿರುವ ಕೋಟೆ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ, ಸಮಿತಿಯ ಅಧ್ಯಕ್ಷರಾಗಿರುವ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಾರ್ಯಾಧ್ಯಕ್ಷ ಉದ್ಯಮಿ ಶಿವರಾಮ ಆಳ್ವ,ಖಜಾಂಜಿ ರಂಜಿತ್ ಬಂಗೇರ, ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ವಿವಿಧ ಪದಾಧಿಕಾರಿಗಳಾದ ಕೃಷ್ಣಪ್ರಸಾದ್ ಆಳ್ವ, ರೋಶನ್ ರೈ ಬನ್ನೂರು, ಸನತ್ ರೈ ಏಳ್ನಾಡುಗುತ್ತು, ಜೋಕಿಂ ಡಿಸೋಜ, ವಿಶ್ವಜಿತ್ ಅಮ್ಮುಂಜ, ಜಯಂತ ನಗರ, ಉನೈಸ್ ಗಡಿಯಾರ, ಲೋಕೇಶ್ ಪಡ್ಡಾಯೂರು, ಸುಶಾಂತ್ ಶೆಟ್ಟಿ ಕಂಬಳಬೆಟ್ಟು,ಸುಮಿತ್ ಶೆಟ್ಟಿ ಕಂಬಳಬೆಟ್ಟು, ಸೀತಾ ಭಟ್, ವಿಕ್ರಂ ಶೆಟ್ಟಿ ಅಂತರ, ಪ್ರಜ್ವಲ್ ತೋಟ್ಲ, ರಾಘವೇಂದ್ರ ಭಂಡಾರಿ, ಕೇಶವ ಪಡೀಲ್, ಸನತ್ ರೈ ವಳತ್ತಡ್ಕ, ಪ್ರಕಾಶ್ ಗೌಡ ನೆಕ್ಕಿಲಾಡಿ, ಅಭಿಜಿತ್ ಕಂಬಳಬೆಟ್ಟು, ಅಜಿತ್ ಪಡ್ನೂರು, ಶೀನಪ್ಪ, ರೋಹನ್‌ರಾಜ್ ಪಡ್ನೂರು, ಹರೀಶ್ ಪಡ್ಡಾಯೂರು, ರಾಜೇಶ್ ಪಡ್ಡಾಯೂರು, ಯೋಗೀಶ್ ಸಾಮಾನಿ ಮಠಂತಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here