ಕ್ರಿಕೆಟ್: ಫಿಲೋಮಿನಾ ಪ್ರೌಢಶಾಲಾ ವಿದ್ಯಾರ್ಥಿಗಳು ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಮತ್ತು ಉಪನಿರ್ದೇಶಕರ ಕಛೇರಿ ಮಂಗಳೂರು,ಇವರ ಆತಿಥ್ಯದಲ್ಲಿ ಮಂಗಳೂರಿನ ನೆಹರು ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಸಂತ ಫಿಲೋಮಿನಾ ಪ್ರೌಢಶಾಲಾ ವಿದ್ಯಾರ್ಥಿಗಳಾದ ಶರಣ್ ಡಿಸಿಲ್ವ. ( ಸಾಮೆತಡ್ಕ ನಿವಾಸಿ ರೇಷ್ಮಾ ಡಿಸಿಲ್ವಾ ಇವರ ಸುಪುತ್ರ ) ಜೇಡನ ಕುಟ್ಟಿನ ( ಬೊಳುವಾರು ನಿವಾಸಿ ಉದ್ಯಮಿ ಜೋಯಲ್ ಕುಟ್ಟಿನ ಹಾಗೂ ಶಾಂತಿ ಕುಟ್ಟಿನ ಇವರ ಸುಪುತ್ರ ) ಶಾನ್ ಜೋಸೆಫ್ ಲೋಬೊ( ದೈಹಿಕ ಶಿಕ್ಷಣ ಶಿಕ್ಷಕ ನರೇಶ್ ಲೋಬೊ ಹಾಗೂ ಸವಿತಾ ಮಸ್ಕರೇನಸ್ ಇವರ ಸುಪುತ್ರ ) ಇವರು ಚೇತನ ಪ್ರೌಢಶಾಲೆ ಬ್ರಹ್ಮಾವರ ಇಲ್ಲಿ ನಡೆಯುವ ಮೈಸೂರು ವಿಭಾಗ ಮಟ್ಟದ ಕ್ರಿಕೆಟ್ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಸಂತ ಫಿಲೋಮಿನಾ ದೈಹಿಕ ಶಿಕ್ಷಣ ನಿರ್ದೇಶಕರಾದ ಏಲಿಯಾಸ್ ಪಿಂಟೋ ಹಾಗೂ ಫಿಲೋಮಿನಾ ಪ್ರೌಢಶಾಲಾ ದೈಹಿಕ ಶಿಕ್ಷಕರಾದ ನರೇಶ್ ಲೋಬೊ ಇವರಿಂದ ತರಬೇತಿಯನ್ನು ಪಡೆದಿರುತ್ತಾರೆ.

LEAVE A REPLY

Please enter your comment!
Please enter your name here