ಕೆದಂಬಾಡಿ: ಬೋಳೋಡಿ -ಪಟ್ಟತ್ತಡ್ಕ ಕಾಂಕ್ರೀಟ್ ರಸ್ತೆ ಉದ್ಘಾಟನೆ

0

ಮುಂದಿನ ಐದು ವರ್ಷಗಳಲ್ಲಿ ಗ್ರಾಮೀಣ ರಸ್ತೆಗಳ ಪೂರ್ತಿ ಅಭಿವೃದ್ದಿ: ಅಶೋಕ್ ರೈ


ಪುತ್ತೂರು: ಮುಂದಿನ ಐದು ವರ್ಷಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ಅಭಿವೃದ್ದಿ ಮಾಡಲಾಗುವುದು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.ಅವರು ಕೆದಂಬಾಡಿ ಗ್ರಾಮದ ಬೋಳೋಡಿ -ಪಟ್ಟತ್ತಡ್ಕ ನೂತನ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.


ರಸ್ತೆ ಕಾಮಗಾರಿಗೆ ನಿಮ್ಮದೇ ತೆರಿಗೆಯ ಹಣವನ್ನು ವಿನಿಯೋಗಿಸಲಾಗುತ್ತದೆ, ಯಾರ ಮನೆಯ ಗಂಟನ್ನು ತಂದು ರಸ್ತೆ ಮಾಡುತ್ತಿಲ್ಲ,ಕಳೆದ ಬಾರಿ ಶಂಕುಸ್ಥಾಪನೆ ಗೈದ ಎಲ್ಲಾ ರಸ್ತೆಗಳಿಗೆ ಕಾಂಗ್ರೆಸ್ ಸರಕಾರ ಅನುದಾನ ನೀಡಿದೆ. ರಸ್ತೆ, ನೀರು ಮತ್ತು ವಿದ್ಯುತ್ ಇದು ಎಲ್ಲಾ ಕುಟುಂಬಗಳಿಗೂ ದೊರೆಯಬೇಕು. ಕುಡಿಯುವ ನೀರಿನ ಸಮಸ್ಯೆ ಇದ್ದವರಿಗೆ ಮುಂದಿನ ಒಂದು ವರ್ಷದೊಳಗೆ ಎಲ್ಲಾ ಮನೆ ಬಾಗಿಲಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಸಂಪರ್ಕ ದೊರೆಯಲಿದೆ. ಜನರ ಸಮಸ್ಯೆಗಳ ಸ್ಪಂದನೆಗೆ ಮೊದಲ ಆಧ್ಯತೆ ನೀಡಲಾಗುವುದು ಎಂದು ಶಾಸಕರು ಹೇಳಿದರು.


ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಮನೋಹರ್ ರೈ ಎಂಡೆಸಾಗು, ಕೆದಂಬಾಡಿ ಗ್ರಾಪಂ ಸದಸ್ಯೆ ಅಸ್ಮಾ, ಬೂತ್ ಅಧ್ಯಕ್ಷರಾದ ಹಬೀಬ್ ಕಣ್ಣೂರು, ವಿಟ್ಲ ಉಪ್ಪಿನಂಗಡಿ ಮಾಜಿ ಬ್ಲಾಕ್ ಅಧ್ಯಕ್ಷರಾದ ಮುರಳೀಧರ್ ರೈ ಮಟಂತಬೆಟ್ಟು, ರಾಕೇಶ್ ರೈ ಕುದ್ಕಾಡಿ, ಸೀತಾರಾಮ ರೈ ಚಾವಡಿ, ಸದಾಶಿವ ರೈ ಪೊಟ್ಟಮೂಲೆ, ರಘುನಾಥ ರೈ ಚಾವಡಿ, ಚಂಧ್ರಾವತಿ ರೈ ಚಾವಡಿ, ಭಾಸ್ಕರ್ ಕೆ ಆರ್, ಹಾರಿಸ್ ಬೋಳೋಡಿ, ಶೀನಪ್ಪ ರೈ ಕೊಡೆಂಕಿರಿ, ಅರುಣ್ ಆಳ್ವ ಬೋಳೋಡಿ, ಭಾಸ್ಕರ ಕೆ ಆರ್, ಶೇಖರ ಕೆ ಅರ್, ಕಿಶೋರ್ ಕೊಡೆಂಕಿರಿ, ಕೀರ್ತನ್ ಕೊಡೆಂಕಿರಿ, ಆನಂದ ಪೂಜಾರಿ, ಗೀತಾ ಕೊಡೆಂಕಿರಿ, ರೇಖಾಬಾಸ್ಕರ್, ಶೋಭಾ ಆನಂದ ಆಲಡ್ಕ, ಸಂಧೀಪ್ ಬೋಳೋಡಿ, ಭಾರತಿ ಬೋಳೋಡಿ, ಸುಮತಿ ಬೋಳೋಡಿ, ಪುಷ್ಪಾವತಿ, ಕಾವ್ಯ ಬೋಳೋಡಿ, ಚಂದ್ರಾವತಿ, ಸೋಮಯ್ಯ ತಿಂಗಳಾಡಿ, ದೇವಯ್ಯ ನಾಯ್ಕ, ಪ್ರಮೋದ ಆಳ್ವ ಬೋಳೋಡಿ ಉಪಸ್ಥಿತರಿದ್ದರು.
ಚಂದ್ರಹಾಸ ರೈ ಬೋಳೋಡಿ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here