ಇರ್ದೆ ಬೆಟ್ಟಂಪಾಡಿ ವಿಪತ್ತು ನಿರ್ವಹಣಾ ಘಟಕದಿಂದ ಕಕ್ಕೂರು ಶಾಲೆಯಲ್ಲಿ ಶ್ರಮದಾನ

0

ನಿಡ್ಪಳ್ಳಿ: ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕಕ್ಕೂರು ಶಾಲೆಯ ರಂಗ ಮಂದಿರದ ಸ್ವಚ್ಛತೆಯನ್ನು ಇರ್ದೆ ಬೆಟ್ಟಂಪಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ಶ್ರಮದಾನದ ಮೂಲಕ ನ.3 ರಂದು ನಿರ್ವಹಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಜ್ಯೋತಿ, ಸಹಶಿಕ್ಷಕ ವಿಷ್ಣು ಭಟ್ ಇನ್ನು ಮುಂದೆಯೂ ಇದೇ ರೀತಿಯ ಸಹಕಾರ ಇರಲಿ ಎಂದು ಹೇಳಿ ಧನ್ಯವಾದ ನೀಡಿದರು. ವಲಯದ ಮೇಲ್ವಿಚಾರಕಿ ಜಯಂತಿ, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಘಟಕದ ಸಂಯೋಜಕಿ ಪದ್ಮಾವತಿ. ಡಿ, ಸದಸ್ಯರಾದ ಸುಬ್ರಹ್ಮಣ್ಯ, ದಿನೇಶ, ಅಶೋಕ, ಮನೋಜ್, ಜಲಜಾಕ್ಷಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here