





ಉಪ್ಪಿನಂಗಡಿ: ಅಂಗಡಿಯಲ್ಲಿ ಯಾರಿಲ್ಲದ ವೇಳೆ ಹಾಡಹಗಲೇ ಅಂಗಡಿಗೆ ನುಗ್ಗಿದ ಕಳ್ಳರು ಹಣವಿಡುವ ಡ್ರಾವರ್ ಓಪನ್ ಮಾಡಿ ಸುಮಾರು ಐದು ಲಕ್ಷದಷ್ಟು ಹಣವನ್ನು ದೋಚಿದ ಘಟನೆ ಗಾಂಧಿಪಾರ್ಕ್ ಬಳಿಯ ಅಡಿಕೆ ಮತ್ತು ಕಾಡುತ್ಪತ್ತಿ ಮಾರಾಟದ ಮಳಿಗೆಯಾದ ಗುಂಡಿಜೆ ಟ್ರೇಡರ್ಸ್ ನಲ್ಲಿ ಅ.27ರಂದು ನಡೆದಿದೆ.



ಇಂದು ಮಧ್ಯಾಹ್ನ ವೇಳೆ ಅಂಗಡಿ ಮಾಲಕರು ಅಂಗಡಿಯ ಶಟರ್ ಅನ್ನು ಓಪನ್ ಆಗಿಯೇ ಇಟ್ಟು, ಕ್ಯಾಷ್ ಡ್ರಾವರ್ ಗೆ ಬೀಗ ಹಾಕಿ ಅಂಗಡಿ ಕೋಣೆಯಿರುವ ವಾಣಿಜ್ಯ ಸಂಕೀರ್ಣದ ಹಿಂಬದಿಯಲ್ಲಿರುವ ಶೌಚಾಲಯಕ್ಕೆ ತೆರಳಿದ್ದರು. ಬರುವಾಗ ಕ್ಯಾಷ್ ಡ್ರಾವರ್ ಮುರಿದಿದ್ದು, ಅದರಲ್ಲಿದ್ದ ಸುಮಾರು ಐದು ಲಕ್ಷದಷ್ಟು ಹಣ ಕಳವುಗೈದಿರುವುದಾಗಿ ವರದಿಯಾಗಿದೆ.





ಬೇಜಾವಬ್ದಾರಿಯೇ ಕಾರಣವೇ??!!
ಈ ಅಂಗಡಿಯೊಳಗೆ ಸಿಸಿ ಕ್ಯಾಮಾರ ಇದ್ದು, ಅದಕ್ಕೆ ರೀಚಾರ್ಜ್ ಮಾಡಿಲ್ಲವಂತೆ. ಹೊರಗಿನ ಸಿಸಿ ಕ್ಯಾಮರಾದ ಸಂಪರ್ಕದ ಸ್ವಿಚ್ ಕೂಡಾ ಕಡಿತಗೊಳಿಸಿದ್ದರಂತೆ. ಇನ್ನೊಂದೆಡೆ ಈ ವಾಣಿಜ್ಯ ಸಂಕೀರ್ಣದಲ್ಲಿ ಸುಮಾರು 10ಕ್ಕಿಂತಲೂ ಕೊಠಡಿಗಳನ್ನು ಬಾಡಿಗೆಗೆ ಕೊಡಲಾಗಿದೆ. ಆದರೆ ಒಂದು ಸಿಸಿ ಕ್ಯಾಮರಾ ಕೂಡಾ ವಾಣಿಜ್ಯ ಸಂಕೀರ್ಣದವರಿಂದ ಅಳವಡಿಸಲಾಗಿಲ್ಲ. ಪ್ರತಿಯೊಂದು ಅಂಗಡಿಯೆದುರು ನಿಂತು ಕಾಯೋದು ಪೊಲೀಸರ ಕೆಲಸ ಅಲ್ಲ. ಸಾರ್ವಜನಿಕರು ಸ್ವಲ್ಪಮಟ್ಟಿನ ಮುನ್ನೆಚರಿಕೆ ತೆಗೆದುಕೊಳ್ಳಬೇಕೆಂಬ ವಿಚಾರಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬರುತ್ತಿದೆ.







