ಆರ್ಲ: ಸೀರೋ ಮಲಬಾರ್ ಯೂತ್ ಮೂವ್‌ಮೆಂಟ್ ಆಶ್ರಯದಲ್ಲಿ ಶಟಲ್ ಬಾಡ್ಮಿಂಟನ್ ಪಂದ್ಯಾಟ

0

ನೆಲ್ಯಾಡಿ: ಇಲ್ಲಿನ ಆರ್ಲ ಸೈಂಟ್ ಮೇರಿಸ್ ಚರ್ಚ್ ನ ಸೀರೋ ಮಲಬಾರ್ ಯೂತ್ ಮೂವ್‌ಮೆಂಟ್ ನೇತೃತ್ವದಲ್ಲಿ ಹೊನಲು ಬೆಳಕಿನ ಶಟಲ್ ಬಾಡ್ಮಿಂಟನ್ ಪಂದ್ಯಾಟ ನ.4ರಂದು ಆರ್ಲದಲ್ಲಿ ನಡೆಯಿತು.

ಉಪ್ಪಿನಂಗಡಿ ಠಾಣೆ ಉಪನಿರೀಕ್ಷಕ ಲಾರೆನ್ಸ್ ಪಾಲೇಲಿ ಪಂದ್ಯಾಟ ಉದ್ಘಾಟಿಸಿದರು. ಗೋಳಿತ್ತೊಟ್ಟು ಗ್ರಾ.ಪಂ.ಸದಸ್ಯ ಜೋಸೆಫ್ ವಿ.ಸಿ., ಆರ್ಲ ಸೈಂಟ್ ಮೇರಿಸ್ ಚರ್ಚ್ ಟ್ರಸ್ಟಿಗಳಾದ ಸೆಬಾಸ್ಟಿಯನ್, ಪ್ರಕಾಶ್, ರೋಬರ್ಟ್, ಮನು ಜೇಮ್ಸ್, ಎಸ್‌ಎಂವೈಎಂ ಅಧ್ಯಕ್ಷ ಶ್ರೀಜಿತ್, ಉಪಾಧ್ಯಕ್ಷೆ ಅಂಕಿತಾ, ಜೇಮ್ಸ್, ಬಾಬುರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸುಮಾರು 36 ತಂಡಗಳು ಭಾಗವಹಿಸಿದ ಟೂರ್ನಿಯಲ್ಲಿ ನೆಲ್ಯಾಡಿಯ ವಿನೀತ್ ಮತ್ತು ಖಲೀಲ್‌ರವರ ತಂಡ ಪ್ರಥಮ ಸ್ಥಾನದೊಂದಿಗೆ 10 ಸಾವಿರ ರೂ.ನಗದು ಹಾಗೂ ಟ್ರೋಫಿ ಪಡೆದುಕೊಂಡಿತು. ದ್ವಿತೀಯ ಸ್ಥಾನ ಪಡೆದುಕೊಂಡ ಸುಶಾಂತ್ ಮತ್ತು ಉತ್ತಮ್‌ರವರ ತಂಡ 7 ಸಾವಿರ ರೂ.ನಗದು ಹಾಗೂ ಟ್ರೋಪಿ, ತೃತೀಯ ಸ್ಥಾನ ಪಡೆದುಕೊಂಡ ನೆಲ್ಸನ್ ಮತ್ತು ಲಿಸನ್‌ನವರ ತಂಡ 5 ಸಾವಿರ ರೂ.ನಗದು ಹಾಗೂ ಟ್ರೋಫಿ ಪಡೆದುಕೊಂಡರು. ಜಿನೋ, ಶ್ರೀಜಿತ್, ಶೆಮಿಲ್, ಡಿವಿನ್ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದರು. ನೆಲ್ಯಾಡಿ, ಆರ್ಲ ಚರ್ಚ್ ಗಳ ಧರ್ಮಗುರುಗಳು, ಕೆಎಸ್‌ಎಂಸಿಎ ನಿರ್ದೇಶಕರಾದ ಫಾ. ಶಾಜಿ ಮ್ಯಾಥ್ಯು, ಸಹಾಯಕ ಧರ್ಮಗುರು ಫಾ. ಬಿಪಿನ್ ಎಸ್.ಎಂ.ಎಮ್‌ರವರು ಸಹಕರಿಸಿದರು

LEAVE A REPLY

Please enter your comment!
Please enter your name here