ಎಡನೀರು ಮಠದಲ್ಲಿ ತೈಲಾಭ್ಯಂಜನ-ಪುತ್ತೂರ ಭಕ್ತರು ಭಾಗಿ

0

ಪುತ್ತೂರು: ಕಾಸರಗೋಡು ಜಿಲ್ಲೆಯ ಎಡನೀರು ಮಠದಲ್ಲಿ ದೀಪಾವಳಿ ನರಕ ಚತುರ್ದಶಿಯಂದು ಪೂರ್ವಾಹ್ನದಿಂದ ಪೂರ್ವ ಸಂಪ್ರದಾಯದಂತೆ ಭಕ್ತರಿಗೆ ತೈಲಾಭ್ಯಂಜನ ನಡೆಯಿತು .
ಪುತ್ತೂರಿನ ಹಲವಾರು ಭಕ್ತರು ಎಡನೀರು ಮಠದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಹಿಂದೆ , ಕೇಶವಾನಂದ ಭಾರತೀ ಶ್ರೀಗಳು ಪುತ್ತೂರಿನಲ್ಲಿ ಚಾತುರ್ಮಾಸ್ಯ ವೃತ , ಯಕ್ಷಗಾನ ಸಪ್ತಾಹಗಳನ್ನು ನಡೆಸಿದ್ದರು. ಪುತ್ತೂರಿಗೂ ಎಡನೀರಿಗೂ ವಿಶೇಷ ನಂಟಿದೆ. ಈ ಬಾರಿಯೂ ಬೆಳಿಗ್ಗೆ ಶ್ರೀ ಗೋಪಾಲಕೃಷ್ಣ ದೇವರ ಪೂಜೆಯ ಬಳಿಕ ನೆರೆದ ನೂರಾರು ಭಕ್ತರಿಗೆ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರೇ ಸ್ವತಃ ಭಕ್ತರ ತಲೆಗೆ ಮಂತ್ರಾಕ್ಷತೆಯೊಂದಿಗೆ ತೈಲವನ್ನು ಎರೆದರು. ಬಳಿಕ ಭಕ್ತರು ನದಿ ಸ್ನಾನ , ಬಿಸಿನೀರ ಸ್ನಾನವನ್ನು ಮಾಡಿದರು.

LEAVE A REPLY

Please enter your comment!
Please enter your name here