ರಾಮನಗರ ಜಿಲ್ಲಾ ನಿವೃತ್ತ ದೈ.ಶಿ.ಪರಿವೀಕ್ಷಣಾಧಿಕಾರಿ ಕುತ್ಯಾಳ ಕಿಟ್ಟಣ್ಣ ರೈ ನಿಧನ

0

ಆಲಂಕಾರು:ಬೆಂಗಳೂರು ರಾಮನಗರ ಜಿಲ್ಲಾ ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿಯಾಗಿದ್ದ ಪೆರಾಬೆ ಗ್ರಾಮದ `ಅವನಿ ನಿಲಯ’ದ ಕುತ್ಯಾಳ ಕಿಟ್ಟಣ್ಣ ರೈ(74ವ.)ರವರು ಅಲ್ಪಕಾಲದ ಅಸೌಖ್ಯದಿಂದ ನ.18ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ರಾಜ್ಯ ದೈಹಿಕ ಶಿಕ್ಷಣ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಸದಸ್ಯರಾಗಿ ಹಾಗು ಸಂಪನ್ಮೂಲ ವ್ಯಕ್ತಿಯಾಗಿಯೂ ಕಾರ್ಯನಿರ್ವಹಿಸಿದ್ದ ಇವರು ರಾಮನಗರ ಜಿಲ್ಲೆಯಲ್ಲಿ ಕಬಡ್ಡಿ,ಕುಸ್ತಿಪಟುವಾಗಿಯೂ ಜನಪ್ರಿಯತೆ ಗಳಿಸಿದ್ದರು.

ಮೃತರು ಪತ್ನಿ ಸರೋಜಿನಿ, ಪುತ್ರಿಯರಾದ ಅಮರವಾತ್ಸಲ್ಯ, ಪ್ರಾಜ್ವಲ್ಯ, ಅಹಲ್ಯ ಹಾಗು ಅಳಿಯಂದಿರಾದ ದಿನೇಶ್ ಶೆಟ್ಟಿ, ಪ್ರಸಾದ್ ಆಳ್ವ, ಹರಿಪ್ರಸಾದ್ ರೈ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.ಹಲವು ಗಣ್ಯರು ಮನೆಗೆ ಭೇಟಿ ನೀಡಿ ಅಂತಿಮದರ್ಶನ ಪಡೆದು ಸಂತಾಪ ಸೂಚಿಸಿದರು.

LEAVE A REPLY

Please enter your comment!
Please enter your name here