ಬಜತ್ತೂರು: ’ದೀಪ ಬೊಲ್ಪು’ ದೀಪಾವಳಿ ಕ್ರೀಡಾಕೂಟ

0

ನೆಲ್ಯಾಡಿ: ’ದೀಪ ಬೊಲ್ಪು’ ದೀಪಾವಳಿ ಪ್ರಯುಕ್ತ ವಿಶೇಷ ಕ್ರೀಡಾಕೂಟ ನ.19ರಂದು ಬಜತ್ತೂರು ಬಾರಿಕೆಯಲ್ಲಿ ನಡೆಯಿತು.
ನಿವೃತ್ತ ಮುಖ್ಯಗುರು ಶಶಿಕಲಾ ರಾವ್ ಗಾಣದಮೂಲೆ ಅವರು ಕ್ರೀಡಾಕೂಟ ಉದ್ಘಾಟಿಸಿದರು. ಸುಮಾರು 500 ಕ್ರೀಡಾಪಟುಗಳು ಭಾಗವಹಿಸಿದರು. ಪ್ರೇಮಾ ಬಾರಿಕೆ ಮತ್ತು ಕಿಶೋರ್ ನೀರಕಟ್ಚೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಸಹ ನಡೆಯಿತು. ಕಾರ್ಯಕ್ರಮದಲ್ಲಿ ಗೋಪಾಲ ದಡ್ಡು, ನಾರಾಯಣ ನೀರಕಟ್ಚೆ, ಸೋಮಸುಂದರ, ಉಮೇಶ್ ಓಡ್ರಪಾಲು ಸಂತೋಷ್ ಜೈನ್, ಧನಂಜಯ ಬಾರಿಕೆ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಮದುಶ್ರೀ ಸ್ವಾಗತಿಸಿ, ರಂಜನ್ ಬಾರಿಕೆ ವಂದಿಸಿದರು. ಚೈತನ್ಯ ಬಾರಿಕೆ, ಧನಂಜಯ ಬಾರಿಕೆ ನಿರೂಪಿಸಿದರು.

LEAVE A REPLY

Please enter your comment!
Please enter your name here