‘ಕ್ರೀಡಾ ಕಾರಂಜಿ’ ಕ್ರೀಡಾಜ್ಯೋತಿಯ ರಥಕ್ಕೆ ಪಾಣಾಜೆಯಲ್ಲಿ ಸ್ವಾಗತ

0

ಪುತ್ತೂರು: ಕಾರಂತರ ಕರ್ಮಭೂಮಿ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯಮಟ್ಟದ 17ರ ವಯೋಮಾನದ ಬಾಲಕ ಬಾಲಕಿಯರ ಕ್ರೀಡಾಕೂಟದ ‘ಕ್ರೀಡಾ ಕಾರಂಜಿ’ ಕ್ರೀಡಾಜ್ಯೋತಿಯ ರಥ ಪಾಣಾಜೆಗೆ ಆಗಮಿಸಿತು. ಆರ್ಲಪದವು ಪೇಟೆಯಲ್ಲಿ ರಥವನ್ನು ಸ್ವಾಗತಿಸಲಾಯಿತು.

ಬಳಿಕ ಪೇಟೆಯಿಂದ ಪಾಣಾಜೆ ಗ್ರಾಮ ಪಂಚಾಯತ್ ಕಛೇರಿ ತನಕ ರಥದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಪಾಣಾಜೆ ಹಿ.ಪ್ರಾ.ಶಾಲೆ, ಸುಭೊಧ ಪ್ರೌಢಶಾಲೆ ಹಾಗೂ ವಿವೇಕ ಆ.ಮಾ.ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು. ಸಂಗ್ರಹಿಸಿದ ಹಸಿರುವಾಣಿಯನ್ನು ಗ್ರಾಮ ಪಂಚಾಯತ್ ಕಛೇರಿ ಬಳಿಯಲ್ಲಿ ನೀಡಲಾಯಿತು. ಅಬೂಬಕ್ಕರ್, ಪಾಣಾಜೆ ಹಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಸೀತಾರಾಮ ಭಟ್, ಪಾಣಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೈಮೂನತ್ತುಲ್ ಮೆಹ್ರಾ, ಕ್ರೀಡಾಜ್ಯೋತಿ ಉಸ್ತುವಾರಿ ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್, ದೇವಿಪ್ರಕಾಶ್ ಶೆಟ್ಟಿ ಕುತ್ಯಾಳ, ಸುಧೀರ್ ಶೆಟ್ಟಿ, ಹಾಗೂ ಶಾಲಾ ಶಿಕ್ಷಕರು, ಗ್ರಾ.ಪಂ.ಸದಸ್ಯರು, ಗ್ರಾಮಸ್ಥರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here