ಹಿಂಜಾವೇ ಕಾರ್ಯಕರ್ತ ಪ್ರವೀಶ್ ಗಡಿಪಾರು ಪ್ರಕರಣ – ಆದೇಶ ಹಿಂಪಡೆಯಲು ಪುತ್ತಿಲ ಪರಿವಾರದಿಂದ ಎಸಿಗೆ ಮನವಿ

0

ಕಾರ್ಯಕರ್ತನಿಗೆ ಸುಳ್ಳು ಪ್ರಕರಣದಲ್ಲಿ ಅನ್ಯಾಯವಾದರೆ ಬಿಡುವ ಪ್ರಶ್ನೆಯೇ ಇಲ್ಲ – ಪ್ರತಿಭಟನೆಯ ಎಚ್ಚರಿಕೆ

ಪುತ್ತೂರು: ಹಲವು ಪ್ರಕರಣಗಳಲ್ಲಿ ಇದ್ದಾರೆಂದು ಆರೋಪಿಸಿ ಈಶ್ವರಮಂಗಲದ ಹಿಂದೂ ಸಂಘಟನೆಯ ಕಾರ್ಯಕರ್ತ ಪ್ರವೀಶ್ ನಾಯರ್‌ನ ಗಡಿಪಾರು ಆದೇಶವನ್ನು ತಡೆ ಹಿಡಿಯಬೇಕೆಂದು ಪುತ್ತಿಲ ಪರಿವಾರದಿಂದ ಸಹಾಯಕ ಆಯುಕ್ತ ಗಿರೀಶ್ ನಂದನ್‌ರವರಿಗೆ ಮನವಿ ಮಾಡಿದ್ದಾರೆ.
ಇಲಾಖಾ ಆದೇಶದಂತೆ ಹಿಂದೂ ಕಾರ್ಯಕರ್ತ ಪ್ರವೀಶ್ ನಾಯರ್ ಕುಂಟಾಪು ಇವರಿಗೆ ವಿನಾಕಾರಣ ಬೀದರ್‌ಗೆ ಗಡಿಪಾರಿಗೆ ಆದೇಶ ನೀಡಿರುತ್ತೀರಿ. ಪ್ರವೀಶ್ ನಾಯರ್ ಅವರ ವಿರುದ್ಧ ಯಾವುದೇ ಪ್ರಕರಣಗಳು ಬಾಕಿ ಇರುವುದಿಲ್ಲ. ಎಂಟು ಹಿಂದೆ ಇದ್ದ ಪ್ರಕರಣಗಳು ಕೂಡ ಪುತ್ತೂರು ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿರುತ್ತದೆ. ಅದಲ್ಲದೆ ಪ್ರವೀಶ್ ನಾಯರ್ ಇವರಿಗೆ ಉಪ್ಪಿನಂಗಡಿ ಪೋಲಿಸ್ ಠಾಣಾ ಅ ಕ್ರ ಅ.ಕ್ರ:12/2023 ಕಲಂ 365ರಲ್ಲಿ ಎಫ್.ಐ.ಆರ್ ನಲ್ಲಿ ಪ್ರವೀಶ್ ನಾಯರ್ ಅವರ ಹೆಸರು ಇರುವುದಿಲ್ಲ. ವಿನಾಕಾರಣ ಚಾರ್ಜ್ ಶೀಟ್‌ನಲ್ಲಿ ಆತನನ್ನು ಸೇರ್ಪಡಿಸಿ ಆ ಕೇಸಿನಲ್ಲಿ ಸಿಲುಕಿಸುವ ಪ್ರಯತ್ನವನ್ನು ಪೋಲೀಸ್ ಅಧಿಕಾರಿಗಳು ಮಾಡಿರುತ್ತಾರೆ. ಕ್ಷುಲ್ಲಕ ಕಾರಣವನ್ನು ಇಟ್ಟುಕೊಂಡು ಹಿಂದೂ ಕಾರ್ಯಕರ್ತರ ಮೇಲೆ ವಿನಾಕಾರಣ ಗಡಿಪಾರು ಮಾಡುವ ಆದೇಶವನ್ನು ಮಾನ್ಯ ಸಹಾಯಕ ಆಯಕ್ತರು ರದ್ದು ಪಡಿಸಬೇಕು. ಇಲ್ಲವಾದಲ್ಲಿ ಪುತ್ತಿಲ ಪರಿವಾರದ ವತಿಯಿಂದ ಹೋರಾಟ ನಡೆಸಬೇಕಾದಿತು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಪ್ರಮುಖರಾದ ಶಿವಾನಂದ್ ವಿಟ್ಲ, ಚಂದ್ರಹಾಸ್ ಈಶ್ವರಮಂಗಲ, ಶ್ರೀಕಾಂತ್ ಹಿಂದಾರ್, ನವೀನ್, ರವಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here